ಮನೆ ರಾಜ್ಯ ದಕ್ಷಿಣ ಕನ್ನಡ: ಸೆ.26 ರಿಂದ ಅ.10 ರ ದಸರಾ ರಜೆ

ದಕ್ಷಿಣ ಕನ್ನಡ: ಸೆ.26 ರಿಂದ ಅ.10 ರ ದಸರಾ ರಜೆ

0

ಮಂಗಳೂರು(Mangalore): ಇದೇ ತಿಂಗಳ 26 ರಿಂದ ಆಗಸ್ಟ್ 10ನೇ ತಾರೀಖಿನವರೆಗೆ ಶಾಲಾ ಮಕ್ಕಳಿಗೆ ರಜೆ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚನೆ ನೀಡಿದ್ದಾರೆ.

ಸೆಪ್ಟೆಂಬರ್ 26ರಿಂದ ನವರಾತ್ರಿ ಹಬ್ಬ ಪ್ರಾರಂಭವಾಗುತ್ತಿದ್ದು ಮಂಗಳೂರು ದಸರಾ, ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಥಬೀದಿ ಶಾರದ ಮಹೋತ್ಸವ, ಮಂಗಳ ದೇವಿ ದೇವಸ್ಥಾನ ಸಹಿತ ನಗರದಲ್ಲೇಡೆ ಅತ್ಯಂತ ಸಂಭ್ರಮದಲ್ಲಿ ಆಚರಿಸಲಾಗುತ್ತದೆ.

ಶಾಲಾ ಮಕ್ಕಳ ರಜೆಯನ್ನು ಹಬ್ಬದ ಸಂದರ್ಭದಲ್ಲಿ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ. ಅಕ್ಟೋಬರ್ ಎರಡರಂದು ಗಾಂಧೀ ಜಯಂತಿಯ ಆಚರಣೆ ಮಾಡುವ ಷರತ್ತಿನೊಂದಿಗೆ ರಜೆ ನೀಡಲು ಸೂಚಿಸಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.