ಮನೆ ದೇವಸ್ಥಾನ ಒಂದೇ ತಿಂಗಳಲ್ಲಿ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ

ಒಂದೇ ತಿಂಗಳಲ್ಲಿ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ

0

ಮೈಸೂರು(Mysuru): ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ನಂಜನಗೂಡು ನಂಜುಂಡೇಶ್ವರ ಒಂದೇ ತಿಂಗಳಲ್ಲಿ ಕೋಟ್ಯಾಧೀಶ್ವರನಾಗಿದ್ದಾನೆ.

ದೇವಾಲಯದ ದಾಸೋಹ ಭವನದಲ್ಲಿ ಶುಕ್ರವಾರ 34 ನಂಜುಂಡೇಶ್ವರನ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 1,35,58,975 ರೂ. ಸಂಗ್ರಹವಾಗಿದೆ.

ಇದರಲ್ಲಿ 131 ಗ್ರಾಂ ಚಿನ್ನ, 4 ಕೆಜಿ 100 ಗ್ರಾಂ ಬೆಳ್ಳಿ, 35 ವಿದೇಶಿ ಕರೆನ್ಸಿ ನಂಜುಂಡೇಶ್ವರನಿಗೆ ಕಾಣಿಕೆಯಾಗಿ ಬಂದಿದೆ.

ಪ್ರತಿ ತಿಂಗಳು ಹುಂಡಿ ಎಣಿಕೆಯಲ್ಲಿ ನಿಷೇಧಿತ ನೋಟು ಪತ್ತೆಯಾಗುತ್ತಿತ್ತು. ಆದರೆ, ಈಗ ಎಣಿಕೆ ಮಾಡಿದಾಗ ಅಂತಹ ನೋಟುಗಳು ಕಂಡುಬಂದಿಲ್ಲ. ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.