ಮನೆ ರಾಜ್ಯ ಟೆಂಟ್ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ

ಟೆಂಟ್ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ

0

ಮೈಸೂರು(Mysuru):  ಇಂದು ಮೈಸೂರು ಶಿಕ್ಷಕರ ಬಳಗದ ವತಿಯಿಂದ ಟೆಂಟ್ ಶಾಲಾ ಮಕ್ಕಳಿಗೆ, ಉಚಿತ ಡ್ರಾಯಿಂಗ್ ಬುಕ್, ಲೇಖನ ಸಾಮಗ್ರಿ ಮತ್ತು ಮಕ್ಕಳಿಗೆ ಸ್ವೀಟನ್ನು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಣದ ನಿರ್ದೇಶಕ ಗೋಪಾಲಕೃಷ್ಣ ವಿತರಣೆ ಮಾಡಿದರು.

ಮೈಸೂರು ಜಿಲ್ಲಾ ಉಪನಿರ್ದೇಶಕರಾದ ಶ್ರೀ ರಾಮಚಂದ್ರ ರಾಜೇ ಅರಸ್, ದಕ್ಷಿಣ ವಲಯ ಶಿಕ್ಷಣಾಧಿಕಾರಿಗಳಾದ ರಾಮಾರಾಧ್ಯ, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮಹಾದೇವ, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಬಿಎಸ್ ಮಂಜುನಾಥ್,  ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾಂತರಾಜು ನಿರ್ದೇಶಕರಾದ ಶ್ರೀಮತಿ ರೇಣುಕಾ, ಶ್ರೀಮತಿ ಶಾಮಲಾ ,ಬಳಗದ ಸದಸ್ಯ ಶಿಕ್ಷಕರು ಟೆಂಟ್ ಶಾಲೆಯ ಶಿಕ್ಷಕರು ಹಾಜರಿದ್ದರು.