ಮನೆ ರಾಜಕೀಯ ಕಟೀಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು: ಬಿ.ಕೆ. ಹರಿಪ್ರಸಾದ್

ಕಟೀಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು: ಬಿ.ಕೆ. ಹರಿಪ್ರಸಾದ್

0

ಮೈಸೂರು(Mysuru): ಕಾಂಗ್ರೆಸ್ ನಿಷೇಧಿಸಬೇಕು ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಆ ವಿಶ್ವಗುರು (ನರೇಂದ್ರ ಮೋದಿ) ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಅಂತಾರೆ, ಅವರ ಚೇಲಾ ಕಟೀಲ್ ಕಾಂಗ್ರೆಸ್ ನಿಷೇಧ ಮಾಡಿ ಎನ್ನುತ್ತಾರೆ. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಮಂಗಳೂರಿನಲ್ಲಿ ಪಿಎಫ್‌ಐ – ಎಸ್‌ಡಿಪಿಐ ಜೊತೆ ಯಾರಿಗೆ ಸಂಬಂಧವಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಗುಜರಾತ್ ಚುನಾವಣೆ ಸಂದರ್ಭದಲ್ಲಿ, ಮೋದಿಗೆ ಜೀವ ಬೆದರಿಕೆ ಎಂಬ ವಿಚಾರವನ್ನು ಬಿಜೆಪಿ ಮುಂದು ಮಾಡುತ್ತದೆ. ಅದರಲ್ಲಿ ವಿಶೇಷ ಏನಿಲ್ಲ. ಲೂಟಿ ರವಿಯ (ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ) ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.