ತುಂಬಾ ಜನರಿಗೆ ರಾತ್ರಿ ಹೊತ್ತು ಮಲಗುವ ಮುಂಚೆ ಅಥವಾ ಮಧ್ಯಾಹ್ನ ಊಟ ಆದ ನಂತರದಲ್ಲಿ ಮೊಸರಿಗೆ ಸ್ವಲ್ಪ ಸಕ್ಕರೆ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಅಂದರೆ ಮೊಸರು ಒಂದು ಇಷ್ಟವಾದ ಆಹಾರ ಪದಾರ್ಥ ಅಥವಾ ಡೈರಿ ಪದಾರ್ಥ ಎಂದು ಕರೆಯಬಹುದು. ಮೊಸರನ್ನು ಕೆಲವರು ಊಟದ ಜೊತೆ ಸೇವಿಸುತ್ತಾರೆ.
ಇನ್ನು ಕೆಲವರು ಇಷ್ಟಪಟ್ಟು ಮೊಸರು ಅನ್ನ ತಿನ್ನುತ್ತಾರೆ. ಆದರೆ ಅಚ್ಚರಿ ಪಡಬೇಕಾದ ವಿಷಯ ಒಂದಿದೆ. ಅದೇನೆಂದರೆ, ಮೊಸರಿನ ವಿಚಾರಕ್ಕೆ ಸಂಬಂಧಪಟ್ಟಂತೆ ವೈದ್ಯರು ಈ ಕೆಳಗಿನ ಮಾತು ಗಳನ್ನು ಹೇಳಿದ್ದಾರೆ ಮತ್ತು ಮೊಸರು ಸೇವನೆಯ ನಿಯಮಗಳನ್ನು ಸಹ ತಿಳಿಸಿದ್ದಾರೆ.
ಮೊದಲಿಗೆ ಈ ವಿಷ್ಯಗಳು ಗೊತ್ತಿರಲಿ…
• ಮೊಸರು ಒಂದು ಹುಳಿ ಪದಾರ್ಥ ಮತ್ತು ಇದು ಜೀರ್ಣ ಪ್ರಕ್ರಿಯೆಯ ನಂತರದಲ್ಲಿ ಪ್ರಭಾವ ತೋರುತ್ತದೆ.
• ಮೊಸರು ಹಗುರ ಆಹಾರ ಪದಾರ್ಥವಲ್ಲ ಮತ್ತು ಇದು ದೇಹಕ್ಕೆ ಉಷ್ಣ ಪ್ರಭಾವ ಹೆಚ್ಚು ಮಾಡುತ್ತದೆ.
• ಹದಲ್ಲಿ ಪಿತ್ತ ಮತ್ತು ಕಫ ದೋಷವನ್ನು ಹೆಚ್ಚಿಸಿ ವಾತ ದೋಷವನ್ನು ಉಪಶಮನಗೊಳಿಸುತ್ತದೆ.
ಮೊಸರು ಸೇವನೆ ಮಾಡಬೇಕಾದ ನಿಯಮಗಳು
• ಡಾ. ಐಶ್ವರ್ಯ ಸಂತೋಷ್ ಹೇಳುವ ಪ್ರಕಾರ ಮೊಸರನ್ನು ರಾತ್ರಿಯ ಸಮಯದಲ್ಲಿ ಸೇವನೆ ಮಾಡ ಬಾರದು. ಕೆಂದರೆ ಮೊಸರು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ.
• ರಾತ್ರಿಯ ಸಮಯದಲ್ಲಿ ಮನುಷ್ಯನಿಗೆ ಕಫ ಹೆಚ್ಚಾಗುತ್ತದೆ ಮತ್ತು ನೆಮ್ಮದಿಯಾಗಿ ನಿದ್ರಿಸಲು ಸಾಧ್ಯ ವಿರುವುದಿಲ್ಲ. ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೆಗಡಿ, ಮೂಗು ಕಟ್ಟುವುದು, ಎದೆ ಕಟ್ಟುವುದು ಹೀಗೆ ಸಮಸ್ಯೆಗಳು ಒಂದೆರಡಲ್ಲ.
ಇದ್ದ ಹಾಗೆ ಸೇವಿಸುವುದು ಒಳ್ಳೆಯದು!
• ಇನ್ನೊಂದು ವಿಚಾರವೆಂದರೆ ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಬಾರದು ಅಥವಾ ಕುದಿಸಬಾರದು.
• ಇದರಲ್ಲಿ ಸಾಕಷ್ಟು ಬಗೆಯ ಆರೋಗ್ಯ ಪ್ರಯೋಜನಗಳನ್ನು ನೀಡುವಂತಹ ಒಳ್ಳೆಯ ಬ್ಯಾಕ್ಟೀರಿಯಗಳು ಇವೆ. ಹಾಗಾಗಿ ಮೊಸರನ್ನು ಬಿಸಿ ಮಾಡಲು ಹೋದರೆ ಅದರ ಒಳ್ಳೆಯ ಗುಣ ಲಕ್ಷಣಗಳು ಹಾಳಾಗುತ್ತವೆ ಮತ್ತು ದೇಹದಲ್ಲಿ ರಕ್ತ ದಾತು ಮೇಲೆ ಪ್ರಭಾವ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಖಾಲಿ ಮೊಸರು ಸೇವಿಸಬೇಡಿ!
ಯಾವುದೇ ಕಾರಣಕ್ಕೂ ಮೊಸರನ್ನು ಹಾಗೆ ಸೇವಿಸಬಾರದು. ಅಂದರೆ ಸಾಧಾರಣ ಹಸುವಿನ ತುಪ್ಪ, ಜೇನುತುಪ್ಪ, ಸಕ್ಕರೆ ಇವುಗಳ ಜೊತೆ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಮತ್ತು ಎದುರಾಗುವ ಅನೇಕ ಕೆಟ್ಟ ಪ್ರಭಾವಗಳು ಇರುವುದಿಲ್ಲ.
ಮೊಸರು ತಿನ್ನುತ್ತೀರಾ? ಪ್ರತಿದಿನ ಬೇಡ!
ಅದೇ ರೀತಿ ಪ್ರತಿದಿನ ಮೊಸರು ಸೇವಿಸಬಾರದು. ಅದರಲ್ಲೂ ಅರ್ಧಂಬರ್ಧ ಹೆಪ್ಪುಗಟ್ಟಿದ ಮೊಸರನ್ನು ತಿನ್ನಲೇಬಾರದು. ಇದು ದೇಹದಲ್ಲಿ ಮಲಬದ್ಧತೆ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂಬುದು ವೈದ್ಯರಾದ ಐಶ್ವರ್ಯ ಸಂತೋಷ್ ರವರ ಮಾತು. ವೈದ್ಯರು ಹೇಳುವ ಪ್ರಕಾರ ಮೊಸರಿನ ಬದಲಿಗೆ ಮಜ್ಜಿಗೆಯನ್ನು ಬೇಕಾದರೆ ಪ್ರತಿದಿನ ಕುಡಿಯಬಹುದು.
ಚರ್ಮದ ಸಮಸ್ಯೆ ಇದ್ದವರು
ಮೊಸರನ್ನು ಯಾವುದೇ ಕಾರಣಕ್ಕೂ ವಸಂತಕಾಲದಲ್ಲಿ, ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಸೇವಿಸ ಬಾರದು. ಒಂದು ವೇಳೆ ನಿಮಗೆ ತ್ವಚೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಇದ್ದರೆ, ಉಸಿ ರಾಟದ ಸಮಸ್ಯೆ ಅಥವಾ ಉರಿಯೂತ ಸಮಸ್ಯೆಗಳಿದ್ದರೆ ಮೊಸರನ್ನು ಸೇವಿಸಬೇಡಿ.
ಕ್ರಮ ಅನುಸರಿಸದಿದ್ದರೆ
ಸರಿಯಾದ ರೀತಿ ಮೊಸರು ಸೇವನೆ ಮಾಡದೇ ಇದ್ದರೆ, ನಿಮಗೆ ಅನಿಮಿಯ ಅಥವಾ ರಕ್ತಹೀನತೆ, ಜ್ವರ, ಆಗಾಗ ಸೋಂಕುಗಳು ಎದುರಾಗುವುದು, ಚರ್ಮದ ತೊಂದರೆಗಳು, ಆರ್ಥ್ರೈಟಿಸ್, ರಕ್ತ ಹೋಗುವ ಸಾಧ್ಯತೆ ಇರುತ್ತದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.