ನಾವು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ತರಕಾರಿಗಳಲ್ಲಿ ಮೂಲಂಗಿ ಸಹ ಒಂದು. ಇದರಿಂದ ಹಲವಾರು ರುಚಿಕರ ಅಡುಗೆಗಳನ್ನು ತಯಾರು ಮಾಡಬಹುದು. ಸಲಾಡ್, ಪಲ್ಯ ಇತ್ಯಾದಿ ಖಾದ್ಯಗಳನ್ನು ತಯಾರಿಸಿ ರುಚಿಕರವಾಗಿ ಸವಿದು ಅನೇಕ ಆರೋಗ್ಯ ಪ್ರಯೋಜನಗಳನ್ನು ನಮ್ಮದಾಗಿಸಿಕೊಳ್ಳಬಹುದು.
ಮೂಲಂಗಿ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲ. ಕೆಲವರು ಇದು ಕಾರ ಜಾಸ್ತಿ ಎನ್ನುವ ಕಾರಣಕ್ಕೆ ಅದರ ಗೋಜಿಗೆ ಹೋಗುವುದಿಲ್ಲ. ಆದರೆ ಖ್ಯಾತ ಪೌಷ್ಟಿಕತಜ್ಞ ಮತ್ತು ಆಹಾರತಜ್ಞರಾದ ಲವ್ನೀತ್ ಅವರು ಹೇಳುವ ಹಾಗೆ ಎಲ್ಲಿ ಅಪರಿಮಿತ ಆರೋಗ್ಯ ಪ್ರಯೋಜನಗಳು ಇರುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಿಕೊಡಲಾಗಿದೆ….
ಆಂಟಿ ಕ್ಯಾನ್ಸರ್ ಗುಣಲಕ್ಷಣಗಳ ನಿರೀಕ್ಷೆ
• ಹೌದು ಮೂಲಂಗಿಯಲ್ಲಿ ಇರುವಂತಹ ಒಳ್ಳೆಯ ಗುಣಲಕ್ಷಣಗಳಲ್ಲಿ ಇದು ಕೂಡ ಒಂದು. ಕ್ಯಾನ್ಸರ್ ಸಮಸ್ಯೆಯನ್ನು ಬರದಂತೆ ತಡೆಯುವಲ್ಲಿ ಮೂಲಂಗಿ ಪಾತ್ರ ದೊಡ್ಡದು.
• ಒಂದು ಅಧ್ಯಯನ ಹೇಳುವ ಹಾಗೆ ಮೂಲಂಗಿಯಲ್ಲಿ ಇರುವಂತಹ ಕೆಲವೊಂದು ಸಂಯುಕ್ತಗಳು ನೀರಿನ ಅಂಶದ ಜೊತೆ ಸೇರಿಕೊಂಡು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಗಡ್ಡೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ಮಧುಮೇಹ ನಿರ್ವಹಣೆ ಸಾಧ್ಯ
• ಇದಕ್ಕೂ ಸಹ ಮೂಲಂಗಿಯಲ್ಲಿ ಇರುವಂತಹ ಮಧುಮೇಹ ವಿರೋಧಿ ಗುಣ ಲಕ್ಷಣಗಳು ಕಾರಣ ವಾಗುತ್ತವೆ. ನಮ್ಮ ದೇಹದ ರೋಗನಿರೋಧಕ ಸಂವೇದನೆಯನ್ನು ಉತ್ತೇಜಿಸಿ ನಾವು ಸೇವನೆ ಮಾಡಿದ ಆಹಾರದಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಪ್ರಮಾಣವನ್ನು ನಿಯಮಿತ ಮತ್ತು ಅಗತ್ಯ ಪ್ರಮಾಣದಲ್ಲಿ ಗ್ಲೂಕೋಸ್ ಆಗಿ ಬದಲಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಿಸುವ ಗುಣ ಇದರಲ್ಲಿದೆ.
• ಮೂಲಂಗಿ ತನ್ನಲ್ಲಿ adiponectin ಎಂಬ ಅಂಶವನ್ನು ನಿಯಂತ್ರಣ ಮಾಡುವ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಣ ಮಾಡುತ್ತದೆ.
ಜೀರ್ಣಶಕ್ತಿಗೆ ತುಂಬಾ ಒಳ್ಳೆಯದು
• ಮೂಲಂಗಿ ತನ್ನಲ್ಲಿ ಕರಗುವ ಮತ್ತು ಕರಗದಿರುವ ನಾರಿನ ಅಂಶವನ್ನು ಒಳಗೊಂಡಿರುತ್ತದೆ. ಇದು ಜೀರ್ಣನಾಳದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
• ನಾರಿನ ಅಂಶ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಕೆಲಸ ಮಾಡುತ್ತದೆ ಎಂಬುದು ಗೊತ್ತಿರುವ ವಿಚಾರ. ಹಾಗಾಗಿ ಕರುಳಿನ ಆರೋಗ್ಯಕ್ಕೆ ಒಂದು ಅತ್ಯುತ್ತಮ ತರಕಾರಿಯೆಂದರೆ ಅದು ಮೂಲಂಗಿ ಎಂದು ಲವ್ನೀತ್ ಹೇಳುತ್ತಾರೆ.
ರಕ್ತದ ಒತ್ತಡ ನಿಯಂತ್ರಕ ಕೂಡ!
• ಯಾರಿಗೆ ಬಿಪಿ ಇರುತ್ತದೆ ಅದರಲ್ಲೂ ಹೈ ಬಿಪಿ ಇರುವವರಿಗೆ ಮೂಲಂಗಿ ತುಂಬಾ ಒಳ್ಳೆಯದು. ಏಕೆಂದರೆ ಮೂಲಂಗಿಯಲ್ಲಿ ಬಾಳೆ ಹಣ್ಣಿನ ಹಾಗೆ ಪೊಟ್ಯಾಶಿಯಂ ಅಂಶ ಇರುತ್ತದೆ.
• ಇದು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ಹೃದಯದ ಕಾರ್ಯಚಟು ವಟಿಕೆ ಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತದೆ. ರಕ್ತ ಸಂಚಾರವನ್ನು ಸರಿಪಡಿಸಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.