ಮೈಸೂರು(Mysuru): ನಾಡಹಬ್ಬ ದಸರಾ ಮುಗಿದು ಒಂದು ತಿಂಗಳು ಕಳೆಯುತ್ತಿದ್ದು, ಇಂದು ದಸರಾದ ಖರ್ಚುವೆಚ್ಚಗಳ ಮಾಹಿತಿಯನ್ನು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೀಡಿದರು.
ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರ ಹಾಗೂ ವಿವಿಧ ಮೂಲಗಳಿಂದ 31, 08, 88, 819 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ನಾಡಹಬ್ಬ ದಸರಾಗೆ ಈ ಬಾರಿ 31,08,88,819 ಕೋಟಿ ರೂ. ಸಂಗ್ರಹಿಸಲಾಗಿದೆ. ಅದರಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ದಸರಾಗಳಿಗೆ ಒಟ್ಟು 28,74,49,058 ಕೋಟಿ ವ್ಯಯಿಸಿದ್ದು, 1.26 ಕೋಟಿ ರೂಪಾಯಿ ಖರ್ಚಾಗದೇ ಉಳಿದಿದೆ ಎಂದು ಮಾಹಿತಿ ನೀಡಿದರು.
ಸಂಗ್ರಹ ಹಣದ ಮೂಲ: ಅಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ – 10 ಕೋಟಿ ರೂ., ಕಾರ್ಯದರ್ಶಿಗಳು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಿಂದ- 5.5ಕೋಟಿ, ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು-9.5ಕೋಟಿ, ಪ್ರಾಯೋಜಕತ್ವದಿಂದ ದಸರಾ ವಿಶೇಷಾಧಿಕಾರಿಗಳ ಉಳಿತಾಯ, ಖಾತೆಗೆ ಸ್ವೀಕೃತವಾದ ಮೊಬಲಗು 32.5 ಲಕ್ಷ ರೂ., ಟಿಕೇಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ ಸ್ವೀಕೃತವಾದ ಮೊತ್ತ-76.38 ಲಕ್ಷ ರೂ, ಮೈಸೂರು ಅರಮನೆ ಮಂಡಳಿಯಿಂದ ಭರಿಸಲಾದ ವೆಚ್ಚ-5ಕೋಟಿ ರೂಪಾಯಿಗಳು.
ವ್ಯಯಿಸಿದ ಹಣ: ದಸರಾ ಉಪ ಸಮಿತಿಗಳು ಹಾಗೂ ಇತರ ಖರ್ಚು ಜತೆಗೆ ಮೈಸೂರು ರಾಜ ವಂಶಸ್ಥರಿಗೆ ಗೌರವ ಧನವಾಗಿ ಜಿಎಸ್ಟಿ ಸೇರಿ 47 ಲಕ್ಷ ರೂ. ನೀಡಲಾಗಿದೆ. ಒಟ್ಟು 26 ಕೋಟಿ 54 ಲಕ್ಷದ 49 ಸಾವಿರದ 058 ರೂಪಾಯಿ ಹಾಗೂ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ 2.20 ಲಕ್ಷ ಸೇರಿ ಒಟ್ಟು 28 ಕೋಟಿ 74 ಲಕ್ಷದ 49 ಸಾವಿರದ 058 ರೂಪಾಯಿಗಳು ಖರ್ಚಾಗಿದೆ.
ಪ್ರಜ್ವಲ್ ವಿರುದ್ಧ ಪಕ್ಷದಿಂದ ಕ್ರಮ…
ಹಾಸನದಲ್ಲಿ ಅಭ್ಯರ್ಥಿ ಗೆಲ್ತಾರೆ, ಅದರಲ್ಲಿ ಸಂಶಯ ಇಲ್ಲ…..
ಕುಟುಂಬದ ಹೆಸರು ತರಬೇಡಿ
ಬಾಲ್ಕನಿಯಿಂದ ಅಪಾರ್ಟ್ಮೆಂಟ್ನ ಛವಣಿಗೆ ಬಿದ್ದ ಮಗು ರಕ್ಷಣೆ.
ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.