ಮನೆ ಅಪರಾಧ ಮೈಸೂರು: ವ್ಯಾಪಾರದಲ್ಲಿ ನಷ್ಟ-  ಗಿರವಿ ಅಂಗಡಿ ಮುಚ್ಚಿ ಪರಾರಿಯಾದ ಮಾಲೀಕ

ಮೈಸೂರು: ವ್ಯಾಪಾರದಲ್ಲಿ ನಷ್ಟ-  ಗಿರವಿ ಅಂಗಡಿ ಮುಚ್ಚಿ ಪರಾರಿಯಾದ ಮಾಲೀಕ

0

ಮೈಸೂರು(Mysuru): ಕೋವಿಡ್ ಸಂದರ್ಭದಲ್ಲಿ ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣ ಗಿರವಿ ಅಂಗಡಿ ಮಾಲೀಕನೋರ್ವ ಗಿರವಿ ಅಂಗಡಿಯನ್ನೇ ಮುಚ್ಚಿ ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ವಿವೇಕಾನಂದ ಸರ್ಕಲ್ ಬಳಿ ಮಾರುತಿ ಪಾನ್ ಮತ್ತು ಜ್ಯುವೆಲರಿ ಅಂಗಡಿ ನಡೆಸುತ್ತಿದ್ದ ನೇಮಿರಾಮ್ ಅಲಿಯಾಸ್ ರಾಮು (50) ಪರಾರಿಯಾದ ವ್ಯಕ್ತಿ.

ಇವರು ಕಳೆದ ಏಳೆಂಟು ವರ್ಷಗಳಿಂದ ಚಿನ್ನದ ಅಂಗಡಿ ನಡೆಸುತ್ತಿದ್ದು, ಈತನ ಬಳಿ ಕೋಟ್ಯಾಂತರ ರೂಪಾಯಿ ಚಿನ್ನ ಅಡವಿಟ್ಟು ಜನರು ಹಣ ಪಡೆಯುತ್ತಿದ್ದರು.

ಕೋವಿಡ್ ಸಂದರ್ಭದಲ್ಲಿ ಗಿರವಿ ಇಡುವವರ ಸಂಖ್ಯೆ ಹೆಚ್ಚಾಗಿದ್ದು, ಆ ಸಂದರ್ಭದಲ್ಲಿ ನೇಮಿರಾಮ್ ಹೆಚ್ಚಿನ ಬಡ್ಡಿಗೆ ಹಣವನ್ನು ಬೇರೆ ಕಡೆಯಿಂದ ತಂದು ಚಿನ್ನ ಗಿರವಿಟ್ಟುಕೊಂಡಿದ್ದನು. ಆದರೆ ಗಿರವಿಟ್ಟ ಚಿನ್ನವನ್ನು ಜನರು ಬಿಡಿಸಿಕೊಳ್ಳಲಿಲ್ಲ. ಇನ್ನೊಂದೆಡೆ ಇವರಿಗೆ ಬಡ್ಡಿ ಕಟ್ಟುವಂತೆ ಒತ್ತಡ ಕೂಡ ಹೆಚ್ಚಾಗಿತ್ತಂತೆ.

ಜೊತೆಗೆ ಪಾಲುದಾರಿಕೆಯಲ್ಲಿ ಪಿರಿಯಾಪಟ್ಟಣದಲ್ಲಿ ಕಾನ್ವೆಂಟ್ ನಡೆಸುತ್ತಿದ್ದರು. ಸಣ್ಣ ಪುಟ್ಟ ರಿಯಲ್ ಎಸ್ಟೇಟ್​ನಲ್ಲೂ ತೊಡಗಿಸಿಕೊಂಡಿದ್ದರು ಎನ್ನಲಾಗ್ತಿದೆ. ಇವರ ವ್ಯವಹಾರಗಳು ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ತನ್ನ ಮನೆಯನ್ನು ಮತ್ತೊಬ್ಬ ಗಿರವಿ ಅಂಗಡಿ ಮಾಲೀಕನಿಗೆ 2.80 ಕೋಟಿಗೆ ಮಾರಿ ಹಣ ಹಾಗೂ ಕೋಟ್ಯಂತರ ರೂ. ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಇದೀಗ ಬಂಗಾರ ಗಿರವಿಯಿಟ್ಟವರು ಕಂಗಾಲಾಗಿದ್ದಾರೆ.

ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.