ಮನೆ ರಾಜ್ಯ ಪಂಚಮಸಾಲಿ 2(ಎ) ಮೀಸಲಾತಿಗೆ ಮಾಜಿ ಸಿಎಂ ಬಿಎಸ್’ವೈ ವಿರೋಧಿಸುತ್ತಿದ್ದಾರೆ: ವಿಜಯಾನಂದ ಕಾಶಪ್ಪನವರ

ಪಂಚಮಸಾಲಿ 2(ಎ) ಮೀಸಲಾತಿಗೆ ಮಾಜಿ ಸಿಎಂ ಬಿಎಸ್’ವೈ ವಿರೋಧಿಸುತ್ತಿದ್ದಾರೆ: ವಿಜಯಾನಂದ ಕಾಶಪ್ಪನವರ

0

ರಾಯಚೂರು: ಪಂಚಮಸಾಲಿ 2(ಎ) ಮೀಸಲಾತಿ ಕಲ್ಪಿಸದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿಸುತ್ತಿದ್ದಾರೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿರುಪತಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವ ವಿಷಯ ಗಮನಕ್ಕೆ ಬಂದಿದೆ ಎಂದರು.

ತಿರುಪತಿಯಲ್ಲಿ ಆಗಿರುವ ಮಾತುಕತೆ ಸಂಬಂಧಿಸಿ ಶೀಘ್ರದಲ್ಲಿಯೆ ಅಧಿಕೃತ ಆಡಿಯೊ ಅಥವಾ ವಿಡಿಯೊ ಬಹಿರಂಗ ಪಡಿಸುತ್ತೇವೆ. ಡಿಸೆಂಬರ್ 12ರೊಳಗೆ ಮೀಸಲಾತಿ ಘೋಷಿಸದೆ ಹೋದಲ್ಲಿ ಯಡಿಯೂರಪ್ಪ ವಿರುದ್ದವೆ ರಾಜ್ಯವ್ಯಾಪಿ ಪ್ರತ್ಯೇಕ ಹೋರಾಟ ರೂಪಿಸಲಾಗುವುದು ಎಂದರು.

ತಾವು ಎರಡನೇ ಮದುವೆ ಆಗುತ್ತಿದ್ದೀರಿ ಎನ್ನುವ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ಇದು ಕಪೊಕಲ್ಪಿತ ವಿಷಯ. ವದಂತಿಗಳಿಗೆ ಕಿವಿಗೊಡದಿರಿ. ದಯವಿಟ್ಟು ವೈಯಕ್ತಿಕ ವಿಷಯಗಳ ಮೇಲೆ ಬೆಳಕು ಚೆಲ್ಲದಿರಿ ಎಂದು ಮನವಿ ಮಾಡಿದರು.