ಮನೆ ರಾಷ್ಟ್ರೀಯ ದೆಹಲಿ ಅಪಘಾತ ಪ್ರಕರಣ: ಕಾರು ಮಾಲೀಕನ ಬಂಧನ

ದೆಹಲಿ ಅಪಘಾತ ಪ್ರಕರಣ: ಕಾರು ಮಾಲೀಕನ ಬಂಧನ

0

ನವದೆಹಲಿ(Newdelhi): ಕಾರಿನಡಿ ಸಿಲುಕಿದ್ದ ಯುವತಿಯ ದೇಹವನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕ ಸೇರಿದಂತೆ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅಶುತೋಷ್‌, ಅಂಕುಶ್ ಖನ್ನಾ ಬಂಧಿತರು.

ಪ್ರಕರಣದಲ್ಲಿ ಗುರುವಾರ ಐದು ಮಂದಿ ಆರೋಪಿಗಳ ಬಂಧನವಾಗಿತ್ತು. ಅವರನ್ನು ದೆಹಲಿ ನ್ಯಾಯಾಲಯ ನಾಲ್ಕು ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.

ಬಂಧಿತರ ಪೈಕಿ ಓರ್ವ, ಅಪಘಾತ ನಡೆದಾಗ ಕಾರಿನಲ್ಲಿ ಇರಲಿಲ್ಲ ಎಂದು ಮೂಲಗಳು ಹೇಳಿವೆ. ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರ ವಿವರವನ್ನು ಪೊಲೀಸರು ಕಲೆ ಹಾಕಿದ್ದರು. ಅದರಂತೆ ಮತ್ತಿಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹೊಸ ವರ್ಷಾಚರಣೆಯ ರಾತ್ರಿ ದೆಹಲಿಯಲ್ಲಿ ಅಂಜಲಿ ಸಿಂಗ್ (20) ಅವರ ಚಲಾಯಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿತ್ತು. ನಂತರ ಮೃತದೇಹವನ್ನು 13 ಕಿ.ಮೀ. ದೂರದವರೆಗೂ ಎಳೆದುಕೊಂಡು ಹೋಗಿದ್ದರು.