ಮನೆ ಅಪರಾಧ ಮೈಸೂರಿನ ನಾಲ್ವರು ರೌಡಿಶೀಟರ್’ಗಳ ಗಡಿಪಾರು: ನಗರ ಪೊಲೀಸ್ ಆಯುಕ್ತರ ಆದೇಶ

ಮೈಸೂರಿನ ನಾಲ್ವರು ರೌಡಿಶೀಟರ್’ಗಳ ಗಡಿಪಾರು: ನಗರ ಪೊಲೀಸ್ ಆಯುಕ್ತರ ಆದೇಶ

0

ಮೈಸೂರು(Mysuru): ನಗರದ ನಾಲ್ವರು ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಿ ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೊತ್ ಆದೇಶ ಹೊರಡಿಸಿದ್ದಾರೆ.

ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಇವರಿಗೆ ಮುಂದಿನ 6 ತಿಂಗಳವರೆಗೆ ಗಡಿಪಾರು ಶಿಕ್ಷೆ ಅನ್ವಯಿಸಲಿದೆ.

ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸತೀಶ್’ನನ್ನು ಚಾಮರಾಜನಗರ ಜಿಲ್ಲೆಗೆ, ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಧುಸೂಧನ್@ ಪಾರ್ಟಿಯನ್ನು ಹಾಸನ ಜಿಲ್ಲೆಗೆ, ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಮಂಜುನಾಥ್.@.ಗೆಂಡೆ ಮಂಜನನ್ನು ಕೊಡಗು ಜಿಲ್ಲೆಗೆ ಹಾಗೂ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಕುಮಾರ.@.ಕಪಾಲಿ ಯನ್ನು  ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶಿಸಿದ್ದಾರೆ.

ಸದರಿ ರೌಡಿ ಶೀಟರ್ ಗಳ ಮೇಲೆ ರೌಡಿ ಹಾಳೆ ತೆಗೆದಿದ್ದರೂ ಮೈಸೂರಿನ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವ ಹಿನ್ನಲೆ ಆಯುಕ್ತರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಸಮಾಜದ ಸ್ವಾಸ್ಥ್ಯ ಕದಡುವುದು, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದು, ಗೂಂಡಾ ವರ್ತನೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಮುಂದಾಗಿರುವ ಹಿನ್ನಲೆ ಗಡಿಪಾರು ಶಿಕ್ಷೆ ವಿಧಿಸಿದ್ದಾರೆ.

ಮುಂದಿನ 6 ತಿಂಗಳ ಕಾಲ ನಾಲ್ವರು ರೌಡಿ ಶೀಟರ್’ಗಳು ಮೈಸೂರನ್ನು ಪ್ರವೇಶಿಸದಂತೆ ಎಚ್ಚರಿಕೆ ನೀಡಲಾಗಿದೆ.

ಅಕ್ರಮ ಚಟುವಟಿಕೆಗಳಲ್ಲಿ ರೌಡಿ ಶೀಟರ್’ಗಳು ಭಾಗಿಯಾಗುವ ಸೂಚನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.