ಮನೆ ಅಪರಾಧ ಮದುವೆಯಾಗಿ ಕೈಕೊಟ್ಟ ಫೇಸ್ ಬುಕ್ ಗೆಳೆಯ: ದೂರು ದಾಖಲು

ಮದುವೆಯಾಗಿ ಕೈಕೊಟ್ಟ ಫೇಸ್ ಬುಕ್ ಗೆಳೆಯ: ದೂರು ದಾಖಲು

0

ಮೈಸೂರು(Mysuru): ಮದುವೆ ನೋಂದಣಿ ಮಾಡಿಸಲು ಅಗತ್ಯ ದಾಖಲೆಗಳನ್ನು ತರಲು ಸಬ್‌’ಅರ್ಬನ್‌ ಬಸ್‌ ನಿಲ್ದಾಣಕ್ಕೆ ಪತ್ನಿಯನ್ನು ಕರೆತಂದ ಪತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಫೇಸ್‌’ಬುಕ್‌ ಮೂಲಕ ಎರಡು ವರ್ಷದ ಹಿಂದೆ ಪ್ರದೀಪ್‌ (28) ಎಂಬಾತನ ಪರಿಚಯವಾಗಿತ್ತು. ಇಬ್ಬರು ಪ್ರೀತಿಸಿ 2022ರ ನ.3ರಂದು ಚಾಮುಂಡಿಬೆಟ್ಟದ ಅರಳಿಮರ ಕೆಳಗಡೆ ಮದುವೆಯಾಗಿದ್ದರು. ನಂತರ ಚಾಮುಂಡಿಪುರಂನ ಕೆ.ಆರ್‌.ಮೊಹಲ್ಲಾದ ಮೇದರಕೇರಿಯಲ್ಲಿ ವಾಸವಾಗಿದ್ದರು.

ನ.7ರಂದು ಮದುವೆ ನೋಂದಣಿಗೆಂದು ತಾಲ್ಲೂಕು ಕಚೇರಿಗೆ ಹೋಗಿದ್ದೆವು. ಶಾಲಾ ಅಂಕಪಟ್ಟಿ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ತರುವಂತೆ ಅಧಿಕಾರಿಗಳು ಸೂಚಿಸಿದ್ದರಿಂದ ಬಸ್‌  ನಿಲ್ದಾಣಕ್ಕೆ ಬಂದಿದ್ದೆವು. ಈ ವೇಳೆ ಸ್ನೇಹಿತನ ಕರೆ ಬಂದಿದ್ದು, ಈಗ ಬರುವುದಾಗಿ ತಿಳಿಸಿ ಹೊರಟುಹೋದರು. ನಂತರ ಮೊಬೈಲ್‌ ಸಂಪರ್ಕಕ್ಕೆ ಸಿಗಲಿಲ್ಲ. ಕಾಣೆಯಾದ ಪತಿಯನ್ನು ಹುಡುಕಿಕೊಡಬೇಕೆಂದು ಎಂದು ಕೃಷ್ಣರಾಜ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.