ಮನೆ ಆರೋಗ್ಯ ತೊಂಡೆಕಾಯಿ-ಬೆಂಡೆಕಾಯಿಯ ಎದುರು ಸಕ್ಕರೆಕಾಯಿಲೆಯ ಆಟ ನಡೆಯಲ್ಲ!

ತೊಂಡೆಕಾಯಿ-ಬೆಂಡೆಕಾಯಿಯ ಎದುರು ಸಕ್ಕರೆಕಾಯಿಲೆಯ ಆಟ ನಡೆಯಲ್ಲ!

0

ನಿಮಗೆ ಗೊತ್ತಿರಲಿ ಮಧುಮೇಹ ಅಥವಾ ಸಕ್ಕರೆಕಾಯಿಲೆ ಎನ್ನುವುದು ಒಂದು ರೀತಿಯ ದೀರ್ಘ ಕಾಲದವರೆಗೆ ಕಾಡುವ ಕಾಯಿಲೆ. ಒಂದುವೇಳೆ ಈ ಕಾಯಿಲೆಯನ್ನು ಅಂಟಿಸಿ ಕೊಂಡ ಬಳಿಕ, ಇದರಿಂದ ಹೊರಗೆ ಬರುವವರು ಇಲ್ಲವೇ ಇಲ್ಲ! ಒಮ್ಮೆ ಈ ಕಾಯಿಲೆ ಕಾಣಿಸಿ ಕೊಂಡ, ಬಳಿಕ ಇಡೀ ಜೀವನ ಪರ್ಯಂತ ಇದರಿಂದ ತೊಂದರೆ ಗ್ಯಾರಂಟಿ! ಹಾಗಾಗಿ ಈ ಕಾಯಿಲೆ ನಮ್ಮನ್ನು ಆವರಿಸಿ ಕೊಳ್ಳುವ ಮೊದಲು ಎಚ್ಚರಿಕೆಯ ಹೆಜ್ಜೆ ಇಡಬೇಕು.

ಒಂದು ಮಾತು ನಾವೆಲ್ಲಾ ನೆನಪಿಟ್ಟುಕೊಳ್ಳಬೇಕು, ಅದೇನೆಂದರೆ ಸಕ್ಕರೆಕಾಯಿಲೆ ಕಾಣಿಸಿ ಕೊಂಡ ಬಳಿಕ ಆಹಾರ ಪದ್ಧತಿ ಸರಿಯಾಗಿರಬೇಕು. ಪ್ರತಿದಿನ ಸೇವನೆ ಮಾಡುವಂತಹ ಆಹಾರ ಪದಾರ್ಥ ಗಳಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆ ಅಂಶ ಹೆಚ್ಚಾಗಿ ಇರಬಾರದು. ಇವೆಲ್ಲದರ ಜೊತೆಗೆ ವೈದ್ಯರ ಸಲಹೆಗಳನ್ನು ಸರಿಯಾಗಿ ಅನುಸರಿಸಿಕೊಂಡು, ಆರೋಗ್ಯಕಾರಿ ಜೀವನಶೈಲಿಯನ್ನು ಅನುಸರಿಸಿ ಕೊಂಡು ಹೋದರೆ ಖಂಡಿತ ದೇಹದಲ್ಲಿ ಕಂಡುಬರುವ ಗ್ಲುಕೋಸ್ ಮತ್ತು ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು…

ಸಕ್ಕರೆಕಾಯಿಲೆಯನ್ನು ಹದ್ದುಬಸ್ತಿನಲ್ಲಿಡುವ ತರಕಾರಿಗಳು

• ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೋಷಕಾಂಶಗಳು ಕೂಡ ತರಕಾರಿ ಗಳಲ್ಲಿ ಸಿಗುತ್ತವೆ. ಅದರಲ್ಲೂ ಪ್ರಮುಖವಾಗಿ ದೀರ್ಘಕಾಲದ ಕಾಯಿಲೆಗಳಾದ ಬಿಪಿ-ಶುಗರ್, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ದೂರ ಮಾಡುವಲ್ಲಿ ಇವುಗಳ ಪಾತ್ರ ಮರೆಯುವ ಹಾಗಿಲ್ಲ.

• ಹೀಗಾಗಿ ಯಾವ ಬಗೆಯ ತರಕಾರಿಯನ್ನು ಕೂಡ ಅಸಡ್ಡೆ ಭಾವನೆಯಿಂದ ನೋಡದೇ, ನಿಯಮಿತ ವಾಗಿ ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ, ಹಲವಾರು ಕಾಯಿಲೆಗಳಿಂದ ದೂರವಿರ ಬಹುದು, ಇಲ್ಲಾಂದ್ರೆ ನಮ್ಮಗೆ ಈಗಾಗಲೇ ಬಂದಿರುವ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ತೊಂಡೆಕಾಯಿ ಹಾಗೂ ಬೆಂಡೆಕಾಯಿ!

ತೊಂಡೆಕಾಯಿಯ ಪ್ರಯೋಜನಗಳು

• ತನ್ನಲ್ಲಿ ಅಧಿಕ ಪ್ರಮಾಣದ ನೀರಿನಾಂಶವನ್ನು ಒಳಗೊಂಡಿರುವ ಈ ತರಕಾರಿಯನ್ನು ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಕೈಬೆರಳಿನಷ್ಟೇ ಉದ್ದಕ್ಕೆ ಬೆಳೆಯುವ ಈ ತರಕಾರಿಯನ್ನು ಕತ್ತರಿಸು ವಾಗ ಕಂಡು ಬರುವ ಅಂಟಾದ ದ್ರವದ ಕಾರಣ ಇದನ್ನು ಹೆಚ್ಚಾಗಿ ಸೇವಿಸಲು ಇಷ್ಟ ಪಡುವುದಿಲ್ಲ!

• ಆದರೆ ಆದರೆ ನಿಮಗೆ ಗೊತ್ತಿರಲಿ, ಹಲವಾರು ಕಾಯಿಲೆಗಳನ್ನು ದೂರ ಮಾಡುವ ಎಲ್ಲಾ ಗುಣಲಕ್ಷಣ ಗಳು ಕೂಡ ಈ ತೊಂಡೆಕಾಯಿಯಲ್ಲಿ ಕಂಡು ಬರುತ್ತದೆ. ಅದರಲ್ಲೂ ಮಧುಮೇಹ ಕಾಯಿಲೆ ಇದ್ದ ವರಿಗೆ ಈ ತರಕಾರಿ ರಾಮಾಬಾಣವಾಗಿ ಕೆಲಸ ಮಾಡುತ್ತದೆ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಒಂದು ಸಂಶೋಧನೆಯ ಪ್ರಕಾರ

• ವರ್ಷಗಳ ಹಿಂದೆ ಅಂದರೆ 2009ರಲ್ಲಿ ನಡೆದ ಒಂದು ವೈದ್ಯಕೀಯ ಸಂಶೋಧನೆಯಲ್ಲಿ ಹೇಳಿರುವ ಪ್ರಕಾರ, ಯಾರು ಈಗಾಗಲೇ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವರೋ, ಅವರು ಮಿತವಾಗಿ ತೊಂಡೆಕಾಯಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುತ್ತಾ ಬಂದರೆ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಸಕ್ಕರೆಕಾಯಿಲೆ ಕೂಡ ಹದ್ದುಬಸ್ತಿನಲ್ಲಿ ಇರುತ್ತದೆ, ಎಂದು ತಿಳಿಸಿದೆ.

• ಹೀಗಾಗಿ ಈ ತರಕಾರಿಯ ಸಂಪೂರ್ಣ ಲಾಭಪಡೆಯಬೇಕೆಂದರೆ ವಾರದಲ್ಲಿ ಒಂದೆರಡು ಬಾರಿಯಾ ದರೂ ಕೂಡ ಪಲ್ಯ, ಸಾರು, ಸಾಗು, ಮಾಡಿಕೊಂಡು ನಿತ್ಯ ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ತುಂಬಾನೇ ಒಳ್ಳೆಯದು.

ಬೆಂಡೆಕಾಯಿ

ಇನ್ನು ಬೆಂಡೆಕಾಯಿಯ ವಿಷ್ಯದಲ್ಲಿಯೂ ಅಷ್ಟೇ ಹೆಚ್ಚಿನವರು, ಈ ತರಕಾರಿಯ ಬಗ್ಗೆ ಅಸಡ್ಡೆ ಮಾಡು ತ್ತಾರೆ. ಬೆಂಡೆಕಾಯಿ ಲೋಳೆ ಎನ್ನುವ ಕಾರಣಕ್ಕೆ, ಈ ತರಕಾರಿಯಿಂದ ದೂರ ನಿಲ್ಲುವವರ ಸಂಖ್ಯೆ ಹೆಚ್ಚು! ಆದರೆ ನಿಮಗೆ ಗೊತ್ತಿರಲಿ, ಮಧುಮೇಹ ಕಾಯಿಲೆ ಇರುವವರಿಗೆ ಬೆಂಡೆಕಾಯಿ ತುಂಬಾನೇ ಒಳ್ಳೆಯದು.

ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ

ಪ್ರಮುಖವಾಗಿ ಈ ತರಕಾರಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇರುವುದರ ಜೊತೆಗೆ ಕರಗುವ ಮತ್ತು ಕರಗದೆ ಇರುವ ಎರಡು ಪ್ರಮಾಣದ ನಾರಿನಾಂಶಗಳು ಕೂಡ ಅಧಿಕ ಪ್ರಮಾಣದಲ್ಲಿ ಸಿಗುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಈ ತರಕಾರಿಯ ಪಾತ್ರ ಬಲು ದೊಡ್ಡದು.