ಎಳನೀರು ಸೇವನೆಯಿಂದ ಅನೇಕ ಕಾಯಿಲೆಗಳಿಂದ ಪಾರಾಗಬಹುದು ಎಂಬ ಮಾತಿದೆ. ಮಾತ್ರೆ ಇಂಜೆಕ್ಷನ್ ಬರೆದು ಕೊಡುವ ಡಾಕ್ಟರ್ ಕೂಡ ಇದನ್ನೇ ಹೇಳುತ್ತಾರೆ. ಹಾಗಾಗಿ ಎಳನೀರು ಅಂದಿನಿಂದ ಇಂದಿನವರೆಗೂ ಒಂದು ಆರೋಗ್ಯಕರ ಪಾನೀಯ ಎಂಬ ಹೆಸರು ಪಡೆದು ಕೊಂಡಿದೆ.
ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಯಾರು ಬೇಕಾದರೂ ಎಳನೀರು ಸೇವಿಸಬಹುದು. ಇದರ ಆರೋಗ್ಯ ಪ್ರಯೋಜನಗಳ ಕುರಿತಾದ ಒಂದು ಸಂಕ್ಷಿಪ್ತ ನೋಟ ಈ ಲೇಖನದಲ್ಲಿದೆ.
ನಿರ್ಜಲೀಕರಣ ಆಗುವುದಿಲ್ಲ
• ಎಳನೀರಿನಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ರೂಪದ ಎಲೆಕ್ಟ್ರೋಲೈಟ್ ಮತ್ತು ಖನಿಜಾಂಶಗಳ ಪ್ರಮಾಣ ಇರಲಿದ್ದು, ಇದು ನಮ್ಮ ದೇಹ ಸೇರಿದರೆ ದೇಹಕ್ಕೆ ಅಗತ್ಯ ವಾಗಿ ಬೇಕಾದ ನೀರಿನ ಅಂಶವನ್ನು ಸಮರ್ಪಕವಾಗಿ ಎಲ್ಲಾ ಸಮಯದಲ್ಲೂ ಕಾಪಾಡಿಕೊಳ್ಳುವಂತೆ ನೋಡಿ ಕೊಳ್ಳುತ್ತದೆ.
• ಇದರಿಂದ ನಿರ್ಜಲೀಕರಣ ಆಗುವುದಿಲ್ಲ. ವಿಶೇಷವಾಗಿ ವಾಂತಿ ಭೇದಿ ಆದಂತಹ ಸಂದರ್ಭದಲ್ಲಿ ಎಳನೀರು ಕುಡಿಯುವುದರಿಂದ ದೇಹದಿಂದ ನಷ್ಟವಾದ ಪೌಷ್ಟಿಕ ಸತ್ವಗಳು ಮತ್ತೆ ಸಿಗುತ್ತವೆ.
ಇದೊಂದು ನೈಸರ್ಗಿಕ ಶಕ್ತಿ ವರ್ಧಕ
• ವ್ಯಾಯಾಮಕ್ಕೆ ಹೋಗುವವರು ಮತ್ತು ವ್ಯಾಯಾಮ ಮಾಡಿ ಬಂದವರು ಒಂದು ಲೋಟ ಎಳನೀರು ಕುಡಿಯು ವುದರಿಂದ ಹೆಚ್ಚಿನ ಲಾಭವಿದೆ. ಇದು ನಿಮ್ಮ ದೇಹಕ್ಕೆ ತಕ್ಷಣವೇ ಶಕ್ತಿ ಮತ್ತು ಚೈತನ್ಯ ಕೊಟ್ಟು, ದೇಹದ ಆರೋ ಗ್ಯವನ್ನು ಕಾಪಾಡುತ್ತದೆ.
• ಸುಸ್ತು ಮತ್ತು ನಿತ್ರಾಣತೆಯನ್ನು ಹೋಗಲಾಡಿಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು, ಹೆಚ್ಚಿನ ಖನಿಜಾಂಶ ಗಳು ಇರಲಿದ್ದು, ಒಂದು ಅವಶ್ಯಕವಾದ ಪಾನೀಯವಾಗಿ ಕೆಲಸ ಮಾಡುತ್ತದೆ.
ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು
• ಒಂದು ಸಂಶೋಧನೆ ಹೇಳುವಂತೆ ಯಾರು ಎಳನೀರನ್ನು ನಿಯಮಿತವಾಗಿ ಕುಡಿಯುತ್ತಾರೆ ಅವರಿಗೆ ಹೃದಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಬರುವು ದಿಲ್ಲ ಎಂದು ತಿಳಿದುಬಂದಿದೆ.
• ಏಕೆಂದರೆ ಎಳನೀರು ತನ್ನಲ್ಲಿ ಪೊಟ್ಯಾಶಿಯಂ ಪ್ರಮಾಣ ವನ್ನು ಹೆಚ್ಚಾಗಿ ಹೊಂದಿದ್ದು, ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಹೃದಯಘಾತ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಬರದಂತೆ ತಡೆಯುತ್ತದೆ.
ಕಿಡ್ನಿ ಕಲ್ಲುಗಳಿಂದ ರಕ್ಷಿಸುತ್ತದೆ
• ಇದಕ್ಕೆ ಕಾರಣ ಎಳನೀರಿನಲ್ಲಿ ಹೆಚ್ಚಾಗಿ ಕಂಡುಬರುವ ಮೆಗ್ನೀಷಿಯಂ ಮತ್ತು ಪೊಟ್ಯಾಶಿಯಂ ಪ್ರಮಾಣ.
• ಇವೆರಡರ ಕಾಂಬಿನೇಷನ್ ನಿಂದ ಎಳನೀರನ್ನು ಮೂತ್ರ ವರ್ಧಕ ಎಂದು ಗುರುತಿಸ ಬಹುದು. ಹೀಗಾಗಿ ಇದು ಕಿಡ್ನಿ ಕಲ್ಲುಗಳ ತೊಂದರೆಯಿಂದ ರಕ್ಷಿಸುವುದು ಮಾತ್ರ ವಲ್ಲದೆ ಸಣ್ಣ ಪುಟ್ಟ ಕಿಡ್ನಿ ಕಲ್ಲುಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ.
ಮಹಿಳೆಯರಿಗೆ ಇದು ತುಂಬಾ ಒಳ್ಳೆಯದು
• ಎಳನೀರು ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.
• ಇದರ ಜೊತೆಗೆ ಬಾಯಾರಿಕೆಯನ್ನು ಹೋಗಲಾಡಿಸಲು ಇದೊಂದು ಅತ್ಯುತ್ತಮ ಪಾನೀಯವಾಗಿದ್ದು, ಗರ್ಭಾವ ಸ್ಥೆಯ ಸಮಯದಲ್ಲಿ ಎದುರಾಗುವ ಅಜೀರ್ಣತೆ, ಎದೆಯುರಿ ಮತ್ತು ಮಲಬದ್ಧತೆ ಸಮಸ್ಯೆಯನ್ನು ಸಹ ಹೋಗಲಾಡಿಸುತ್ತದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.