ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎನ್ನುವುದನ್ನು ನೀವು ಕೇಳಿರುವಿರಿ. ಇದು ಅಕ್ಷರಶಃ ಸತ್ಯ. ಕೆಲವೊಮ್ಮೆ ಆಕೆ ಸಣ್ಣಪುಟ್ಟ ವಿಚಾರಕ್ಕೆ ಖುಷಿ ಪಟ್ಟುಕೊಂಡರೆ ಇನ್ನೂ ಕೆಲವೊಮ್ಮೆ ನೀವು ಆಕೆಯ ಮುಂದೆ ಎಷ್ಟೇ ದೊಡ್ಡ ಗಿಫ್ಟ್ ನೀಡಿದರೂ ಸಂತೋಷ ಪಡುವುದಿಲ್ಲ. ಮಹಿಳೆರನ್ನು ಮೆಚ್ಚಿಸಲು ಪುರುಷರು ಹರಸಾಹಸ ಪಡಲೇ ಬೇಕು. ಯಾವ ಕ್ಷಣ ಹೇಗಿರ್ತಾರೆ ಅನ್ನೋದನ್ನು ಊಹಿಸಲೂ ಸಾಧ್ಯವಿಲ್ಲ.
ಎಷ್ಟೇ ವರ್ಷಗಳಿಂದ ಜೊತೆಗಿದ್ದರೂ ತಮ್ಮ ಪತ್ನಿ ಅಥವಾ ಸ್ನೇಹಿತೆಗೆ ಏನು ಬೇಕು, ಯಾವುದು ಆಕೆಯನ್ನು ಸಂತೋಷ ಪಡಿಸಬಲ್ಲದು ಎನ್ನುವುದು ಬಹಳಷ್ಟು ಪುರುಷರಿಗೆ ತಿಳಿದಿರುವುದೇ ಇಲ್ಲ. ಪ್ರತಿಯೊಬ್ಬ ಪುರುಷನು ತಿಳಿದುಕೊಳ್ಳಬೇಕಾದ ಮಹಿಳೆಯರ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ.
ಯಾವಾಗಲೂ ಬೆಂಬಲ ನೀಡುವುದು
ಮಹಿಳೆಯರೊಂದಿಗೆ ಸ್ವಲ್ಪ ಮೋಜು ಮತ್ತು ಜಗಳ ಸರಿ. ಆದರೆ ಮಹಿಳೆಯರನ್ನು ಗೌರವಿಸುವ ವಿಷಯಕ್ಕೆ ಬಂದಾಗ ತನ್ನ ಸಂಗಾತಿ ಯಾವಾಗಲೂ ತನ್ನ ಪರವಾಗಿ ನಿಲ್ಲಬೇಕೆಂದು ಆಕೆ ಬಯಸುತ್ತಾಳೆ. ಯಾವುದೇ ಸಂದರ್ಭದಲ್ಲಿಯೂ ಸಂಗಾತಿ ತನ್ನ ಬೆನ್ನೆಲುಬಾಗಿ ನಿಲ್ಲುವುದನ್ನು ಓರ್ವ ಮಹಿಳೆ ಬಯಸುತ್ತಾಳೆ.
ಜೊತೆಗೆ ಸಮಯ ಕಳೆಯುವುದು
ನಿಮ್ಮ ಸಂಗಾತಿಯು ನಿಮ್ಮ ಹತ್ತಿರ ಅಥವಾ ಜೊತೆಯಲ್ಲಿದ್ದಾಗ ನೀವು ಆಕೆಯೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಆಕೆ ಬಯಸುತ್ತಾಳೆ. ಆ ಸಮಯದಲ್ಲಿ ಅವಳು ನಿಮ್ಮ ಗಮನವನ್ನು ಬಯಸುತ್ತಾಳೆ.
ಆಕೆಯೊಂದಿಗಿರುವಾಗ ನಿಮ್ಮ ಫೋನ್ ಅನ್ನು ಬದಿಗಿಡಿ. ನೀವು ಚಲನಚಿತ್ರ ನೋಡಲು ಹೋಗಬಹುದು ಅಥವಾ ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಆಕೆಯೊಂದಿಗೆ ಹೊರಗೆ ಹೋಗಿ ಸಮಯ ಕಳೆಯಬಹುದು.
ಪ್ರಾಮಾಣಿಕವಾಗಿರುವುದು
ಸಾರ್ವಜನಿಕ ಸ್ಥಳದಲ್ಲಿ ಸಂಗಾತಿಯನ್ನು ತಬ್ಬಿಕೊಳ್ಳುವುದು, ಕೈಗಳನ್ನು ಹಿಡಿದುಕೊಳ್ಳುವುದು ಪ್ರತಿಯೊಬ್ಬ ಮಹಿಳೆಗೆ ಖುಷಿ ನೀಡುತ್ತದೆ. ಅವಳು ಯಾವಾಗಲೂ ತನ್ನ ಸಂಗಾತಿ ತನ್ನಲ್ಲಿ ವಿಶೇಷ ಭಾವನೆ ಮೂಡಿಸಬೇಕೆಂದು ಬಯಸುತ್ತಾಳೆ. ನೀವು ಪ್ರಪಂಚದ ದೃಷ್ಟಿಯಲ್ಲಿ ಹೇಗಿದ್ದರೂ ನೀವು ಅವರ ಭಾವನೆಗಳಿಗೆ ಪ್ರಾಮಾಣಿಕವಾಗಿರಬೇಕು.
ಯಾವುದೇ ಮಹಿಳೆ ತನ್ನ ಪುರುಷ ಸಂಗಾತಿಯಿಂದ ದ್ರೋಹವನ್ನು ಸಹಿಸುವುದಿಲ್ಲ. ನಿರಂತರವಾಗಿ ಸುಳ್ಳು ಹೇಳುವ ಬದಲು ಆಕೆಗೆ ಒಮ್ಮೆ ಸತ್ಯವನ್ನು ಹೇಳಿ. ಆಕೆಯೊಂದಿಗೆ ಪ್ರಾಮಾಣಿಕವಾಗಿರಲು ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಿ.
ವಿಶೇಷ ಭಾವನೆ ಮೂಡಿಸಿ
ಪುರುಷರು ಮಹಿಳೆಯರನ್ನು ನಿಷ್ಠಾವಂತ ಸ್ನೇಹಿತರಂತೆ ನೋಡಿಕೊಳ್ಳಬೇಕು. ನೀವು ಆಕೆಯನ್ನು ಹೊಗಳಬೇಕು. ಆದರೆ ಪ್ರತಿ ಬಾರಿ ಹೊಗಳುವುದು ಸಾಧ್ಯವಿಲ್ಲ, ಹಾಗಾಗಿ ಕನಿಷ್ಟ ಪಕ್ಷ ಆಕೆಗೆ ವಿಶೇಷ ಭಾವನೆಯನ್ನು ಮೂಡಿಸಬೇಕು. ಅದರಲ್ಲೂ ಆಕೆ ನಿಮ್ಮ ಸಂಗಾತಿ ಅಥವಾ ಪ್ರೇಯಸಿಯಾಗಿದ್ದರೆ ಅವಳಿಗೆ ವಿಶೇಷ ಭಾವನೆ ಮೂಡಿಸುವುದು ನಿಮ್ಮ ಕರ್ತವ್ಯ. ಆಕೆ ನಿಮ್ಮ ಜೀವನದಲ್ಲಿನ ಓರ್ವ ವಿಶೇಷ ವ್ಯಕ್ತಿ.
ನೀವು ಯಾವಾಗಲೂ ಅವಳಿಗೆ ಈ ಭಾವನೆಯನ್ನು ನೀಡಬೇಕೆಂದು ಅವಳು ಬಯಸುತ್ತಾಳೆ. ಇಷ್ಟೇ ಅಲ್ಲ, ನಿಮ್ಮ ಸ್ತ್ರೀ ಸಂಗಾತಿ ಹೇಳುವುದನ್ನೆಲ್ಲಾ ನೀವು ಕೇಳಬೇಕು. ಯಾವಾಗಲೂ ನಿಮ್ಮ ಮನಸ್ಸಿನಲ್ಲಿರುವುದೇ ನಡೆಯಬೇಕೆಂದು ಯೋಚಿಸುವುದು ಸರಿಯಲ್ಲ. ಪುರುಷರು ತಮ್ಮ ಮಾತುಗಳಿಗೂ ಬೆಲೆ ನೀಡಬೇಕೆಂದು ಮಹಿಳೆಯರು ಬಯಸುತ್ತಾರೆ.
ರಾಜ್ಯದ ಜನರಿಗೆ ಗುಡ್ ನ್ಯೂಸ್
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಹುಂಡಿ ಎಣಿಕೆ ಕಾರ್ಯ
ನರೇಂದ್ರ ಮೋದಿ ಅವರ ಆಸ್ತಿ ಎಷ್ಟಿದೆ ಗೊತ್ತಾ ?
ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಡಿಕೆ ಶಿವಕುಮಾರ್..
ಬಸ್ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ…
ಹಿಮಾಚಲ್ ಪ್ರದೇಶ್, ಮಂಡಿಯಲ್ಲಿ ನಾಮಪತ್ರ ಸಲ್ಲಿಸಿದ ಕಂಗನಾ ರಣಾವತ್..
ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾಮಾತೆಗೆ ಮೋದಿ ಪೂಜೆ.
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ "ನಮೋ"
ಬೆಳ್ಳಂಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಇಂದ ಗಂಧದಕಡ್ಡಿ ತಯಾರಿಕ ಘಟಕಕ್ಕೆ ಬೆಂಕಿ…
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.