ಮನೆ ಅಪರಾಧ ಕೌಟುಂಬಿಕ ಕಲಹ: ಪತ್ನಿ, ಮಕ್ಕಳನ್ನು ಕೊಂದ ವ್ಯಕ್ತಿ

ಕೌಟುಂಬಿಕ ಕಲಹ: ಪತ್ನಿ, ಮಕ್ಕಳನ್ನು ಕೊಂದ ವ್ಯಕ್ತಿ

0

ಶಿಡ್ಲಘಟ್ಟ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ತನ್ನಿಬ್ಬರು ಹೆಣ್ಣು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಹೆಣ್ಣೂರಿನಲ್ಲಿ ಬುಧವಾರ ನಡೆದಿದೆ.

ಘಟನೆ ಬಳಿಕ ಆರೋಪಿ ಸೊಣ್ಣೇಗೌಡ ಕ್ರಿಮಿನಾಶಕ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ನೇತ್ರಾವತಿ, ಸ್ನೇಹಾ ಮತ್ತು ವರ್ಷ ಹತ್ಯೆಯಾದವರು.

ತನ್ನ ಪತ್ನಿಯ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಸೊಣ್ಣೇಗೌಡ ಈ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ.

 ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.