ಮನೆ ರಾಜ್ಯ ಹುಣಸೂರು ತಾಲೂಕಿನ ಹಲವೆಡೆ ಮಳೆ; ಸಿಡಿಲಿನಿಂದಾಗಿ ಹೊತ್ತಿ ಉರಿದ ತೆಂಗಿನ ಮರ

ಹುಣಸೂರು ತಾಲೂಕಿನ ಹಲವೆಡೆ ಮಳೆ; ಸಿಡಿಲಿನಿಂದಾಗಿ ಹೊತ್ತಿ ಉರಿದ ತೆಂಗಿನ ಮರ

0

ಹುಣಸೂರು: ತಾಲೂಕಿನ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದು, ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದಿದೆ.

ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದರೆ, ನಾಗರಹೊಳೆ ಉದ್ಯಾನದ ಡಿ.ಬಿ.ಕುಪ್ಪೆ, ಕಾಕನಕೋಟೆ, ಹುಣಸೂರು, ವೀರನಹೊಸಹಳ್ಳಿ ವಲಯದಲ್ಲೂ ಸಾದಾರಣ ಮಳೆಯಾಗಿದೆ. ಆನೆ ಚೌಕೂರುವಲಯದಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಸಹಿತ ಮಳೆಯಾಗಿದೆ.

ನಗರದ ಹಾರಂಗಿ ಕ್ವಾಟ್ರಸ್ ನಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದು ಭಸ್ಮವಾಗಿದೆ.