ಬೇಸಿಗೆ ಬಂದರೆ ಸಾಕು ಮನೆಯಲ್ಲಿ ಇರಲಾರದೆ, ಪ್ರವಾಸವು ಮಾಡಲಾಗದೆ ಒದ್ದಾಡುತ್ತಿರುತ್ತೇವೆ. ಆದರೆ ಮಕ್ಕಳಿಗೆ ದೀರ್ಘಾವಧಿಯ ರಜೆ ಅಂತ ಸಿಗುವುದು ಇದೇ ಬೇಸಿಗೆಯ ಋತುವಿನಲ್ಲಿ. ಮಕ್ಕಳು ಕೂಡ ಹಾಯಾಗಿ ಹೋಂ ವರ್ಕ್, ಎಕ್ಸಾಂಗಳಿಂದ ಆಗ ತಾನೇ ಈಚೆ ಬಂದಿರುತ್ತಾರೆ.
ಮಕ್ಕಳನ್ನು ಕರೆದುಕೊಂಡು ಎಲ್ಲಿಗಪ್ಪಾ ಹೋಗೋದು ಅಂತ ಯೋಚಿಸಬೇಡಿ. ಏಕೆಂದರೆ ನಮ್ಮ ಕರ್ನಾಟಕದಲ್ಲಿಯೇ ತಂಪಾದ ತಾಣಗಳಿವೆ. ಅವುಗಳು ಬೇಸಿಗೆಯ ಕಾಲದಲ್ಲಿಯು ತಮ್ಮ ಆಹ್ಲಾದಕರವಾದ ಋತುಮಾನಕ್ಕೆ ತುಂಬಾ ಜನಪ್ರಿಯವಾಗಿದೆ. ಹಾಗಾದರೆ ಯಾವ ತಾಣಗಳಿಗೆ ಪ್ರವಾಸ ಯೋಜಿಸುವುದು ಉತ್ತಮ ಎಂಬುದನ್ನು ಇಲ್ಲಿ ತಿಳಿಯಿರಿ.
ಕೂರ್ಗ್
ಭಾರತದ ಸ್ಕಾಟ್ಲ್ಯಾಂಡ್ ಎಂದೇ ಚಿರಪರಿಚಿತವಾಗಿರುವ ಕೂರ್ಗ್ ಅತ್ಯಂತ ರಮಣೀಯವಾದ ಗಿರಿಧಾಮವಾಗಿದೆ. ನವ ಜೋಡಿಗಳ ಮಧುಚಂದ್ರಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ವರ್ಷವಿಡೀ ಆಹ್ಲಾದಕರವಾದ ಹವಾಮಾನವನ್ನು ಕೂರ್ಗ್ ಹೊಂದಿರುತ್ತದೆ. ಬೇಸಿಗೆಯಿಂದ ಪಾರಾಗಲು ಕುಟುಂಬದ ಜೊತೆ ಕೂರ್ಗ್ಗೆ ಭೇಟಿ ನೀಡಬಹುದು.
ಇಲ್ಲಿ ಸಮೃದ್ಧವಾಗಿ ಬೆಳೆದ ಕಾಫಿ ತೋಟಗಳು, ಜಲಪಾತಗಳು, ಆಧ್ಯಾತ್ಮಿಕತೆ ಹೆಚ್ಚಿಸುವ ದೇವಾಲಯಗಳಿವೆ. ಮಡಿಕೇರಿಯಲ್ಲಿಯು ನೀವು ಸಾಕಷ್ಟು ಸ್ಥಳಗಳನ್ನು ಸಂದರ್ಶಿಸಬಹುದು.
ದಾಂಡೇಲಿ
ಸಾಹಸಿಗಳ ಸ್ವರ್ಗ ದಾಂಡೇಲಿ ಅತ್ಯಂತ ಸೊಗಸಾದ ಸ್ಥಳವಾಗಿದೆ. ಇಲ್ಲಿ ಮಾಗೋಡು ಜಲಪಾತ, ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಉಳವಿ ದೇವಾಲಯ, ಶಿವಾಜಿ ಕೋಟೆ, ಸಾಥೋಡಿ ಜಲಪಾತ, ಮೌಂಟೇನ್ ಬೈಕಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್, ಕಯಾಕಿಂಗ್, ರಿವರ್ ರಾಫ್ಟಿಂಗ್ ಸೇರಿದಂತೆ ಇನ್ನು ಹೆಚ್ಚಿನ ಸಾಹಸಗಳನ್ನು ಹಾಗು ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಬಹುದು. ವರ್ಷವಿಡೀ ದಾಂಡೇಲಿ ಕೂಡ ಅದ್ಭುತವಾದ ವಾತಾವರಣವನ್ನು ಹೊಂದಿರುತ್ತದೆ. ದಾಂಡೇಲಿಗೆ ಬೇಸಿಗೆಯಲ್ಲಿ ಕುಟುಂಬ ಪ್ರವಾಸ ಯೋಜಿಸಬಹುದು.
ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ ಸಾಹಸಿಗಳಿಗೆ ಹಾಗು ಪ್ರಕೃತಿಯನ್ನು ಪ್ರೀತಿಸುವವರಿಗೆ ಅತ್ಯುತ್ತಮ ಸ್ಥಳವಾಗಿದೆ. ಝಡ್ ಪಾಯಿಂಟ್, ರಾಕ್ ಗಾರ್ಡನ್, ರಾಜೇಂದ್ರ ಬೆಟ್ಟ, ಮುಳ್ಳಯ್ಯನಗಿರಿ, ಶಾಂತಿ ಜಲಪಾತಗಳಂತಹ ಅದ್ಭುತವಾದ ಪ್ರವಾಸಿ ಸ್ಥಳಗಳನ್ನು ನೀವು ಕೆಮ್ಮಣ್ಣುಗುಂಡಿಯ ಪ್ರವಾಸದಲ್ಲಿ ಪರಿಪೂರ್ಣವಾಗಿ ಅನ್ವೇಷಿಸಬಹುದು. ಮೌಂಟೇನ್ ಬೈಕಿಂಗ್, ರೋಡ್ ಬೈಕಿಂಗ್, ಟ್ರೆಕ್ಕಿಂಗ್ ಗಳಂತಹ ಸಾಹಸಗಳಲ್ಲಿ ತೊಡಗಿಸಿಕೊಳ್ಳಬಹುದು.
ಆಗುಂಬೆ
ಆಗುಂಬೆಯ ಸೌಂದರ್ಯವನ್ನು ವರ್ಷವಿಡೀ ಆನಂದಿಸಬಹುದು. ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುರಂಜಿ ಎಂದೇ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಗುಂಬೆ ಕೂಡ ಒಂದು. ಇಲ್ಲಿ ಅಪರೂಪದ ಸಸ್ಯಗಳು ಹಾಗು ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಆಗುಂಬೆಯ ಪ್ರವಾಸಕ್ಕೆ ಹೋದಾಗ ನೀವು ಸಾಕಷ್ಟು ಧಾರ್ಮಿಕ ತಾಣಗಳಿಗೆ ಹೋಗಬಹುದು.
ಕೊಡಚಾದ್ರಿ
ಸಮುದ್ರ ಮಟ್ಟದಿಂದ ಸುಮಾರು 4411 ಅಡಿ ಎತ್ತರದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಚಾದ್ರಿ ಆಹ್ಲಾದಕರವಾದ ತಾಣವಾಗಿದೆ. ಎತ್ತ ನೋಡಿದರು ನಿತ್ಯಹರಿದ್ವರ್ಣ ಕಾಡುಗಳ ಅದ್ಭುತ ನೋಟ ಕಣ್ಣಿಗೆ ಬೀಳುತ್ತದೆ. ಟ್ರೆಕ್ಕಿಂಗ್ ಟ್ರೇಲ್ ಗಳಿಗೆ ಈ ತಾಣ ಹೇಳಿ ಮಾಡಿಸಿದ ಹಾಗೆ ಇದೆ. ಪ್ರಕೃತಿಯನ್ನು ಆರಾಧಿಸುವ ಹಾಗು ಸಾಹಸ ಕೈಗೊಳ್ಳಲು ಬಯಸುವ ಮಂದಿ ಕೊಡಚಾದ್ರಿಯ ಪ್ರವಾಸ ಯೋಜಿಸಬಹುದು.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.