ನಾಗ್ಪುರ: ಉಗ್ರ ಸಂಘಟನೆ ಎನ್ನಲಾದ ‘ಗಾಜವಾ ಏ ಹಿಂದ್’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸತರಂಜಿಪುರ ಹಾಗೂ ಗವಾಲಿಪುರಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಗುರುವಾರ ಬೆಳಿಗ್ಗೆ 5ರ ಸುಮಾರಿಗೆ ಶೋಧಕಾರ್ಯ ನಡೆಸಿದೆ.
ಶೋಧಕಾರ್ಯ ನಡೆಸುವ ವೇಳೆ ಮೂವರನ್ನು ಪ್ರಶ್ನಿಸಲಾಗಿದೆ. ಜೊತೆಗೆ ತನಿಖೆಗೆ ಹಾಜರಾಗುವಂತೆ ಎನ್’ಐಎ ಈ ಮೂವರಿಗೂ ನೋಟಿಸ್ ನೀಡಿದೆ.
ಈ ಮೂವರಲ್ಲಿ ಸತರಂಜಿಪುರದ ಒಬ್ಬರ ಮೊಬೈಲ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಹಿಂಸೆ ಮಾರ್ಗದ ಮೂಲಕ ಭಾರತವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿ ರೂಪಿಸಲು ‘ಗಾಜವಾ ಏ ಹಿಂದ್’ ಉಗ್ರ ಸಂಘಟನೆ ಬಯಸಿದೆ. ಇದಕ್ಕಾಗಿ ಭಾರತದ ಯುವಕರನ್ನು ಬಳಸಿಕೊಳ್ಳಲು ಇಚ್ಛಿಸಿದೆ. ಇದನ್ನು ಸಾಧ್ಯವಾಗಿಸಿಕೊಳ್ಳಲು ಈ ಸಂಘಟನೆಯು ವಾಟ್ಸ್ ಆ್ಯಪ್ ಗ್ರೂಪ್ ವೊಂದನ್ನು ರಚಿಸಿದೆ ಎಂದು ಎನ್ಐಎ ಆರೋಪಿಸಿದೆ.















