ಹಳೆಬೀಡು ಶಿಲ್ಪಕಲೆಯ ನೆಲೆವೀಡು. ಹಳೆಬೀಡಿನ ವೈಭವ ವರ್ಣಿಸಲಸದಳ. ಹಳೆಬೀಡಿನ ಮೊದಲ ಹೆಸರು ದೋರಸಮುದ್ರ. 950ಕ್ಕೆ ಮೊದಲೇ ಭಾವದೋರ ಎಂಬಾತ ಇಲ್ಲಿ ಕೆರೆಯನ್ನು ನಿರ್ಮಿಸಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ದೋರಸಮುದ್ರ ಎಂದು ಹೆಸರು ಬಂದಿತ್ತು ಎನ್ನುತ್ತಾರೆ.
ಬೆಟ್ಟಗುಡ್ಡಗಳಿಂದಾವರಿಸಿ, ವಿಶಾಲ ಕಣಿವೆಗಳಿರುವ ಈ ರಮ್ಯತಾಣ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ವಿಸ್ತಾರಗೊಂಡಿತು. ಒಂದನೇ ಬಲ್ಲಾಳ ಬೇಲೂರನ್ನೂ, ವಿಷ್ಣವರ್ಧನ ವಿಷ್ಣುಸಮುದ್ರವನ್ನೂ ನೆಲೆವೀಡಾಗಿ ಮಾಡಿಕೊಂಡರೂ ಒಂದುಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿದ್ದ ದೋರಸಮುದ್ರ ಹಳೇಬೀಡು ಎಂಬ ಅಭಿದಾನದಿಂದ ಜಗದ್ವಿಖ್ಯಾತವಾಯ್ತು.
ಹೆಸರು ಹಳೆಯ ಬೀಡಾದರೂ, ಇಲ್ಲಿನ ಶಿಲ್ಪಕಲೆಗಳು ನವನವೀನ, ನಿತ್ಯನೂತನ. ಹಳೆಯ ಬೀಡಿನಲ್ಲಿ ಹಲವಾರು ಅತ್ಯಂತ ಸುಂದರ ದೇಗುಲಯಗಳಿವೆಯಾದರೂ, ಅಲ್ಲಾಉದ್ದೀನನ ದಂಡನಾಯಕ ಮಲ್ಲಿಕ್ ಕಾಫೂರ್ ಸೇರಿದಂತೆ ಹಲವು ಮುಸಲ್ಮಾನ ದೊರೆಗಳ ದಾಳಿಯ ಬಳಿಕ ಈ ಹೊತ್ತು, ಸುಸ್ಥಿತಿಯಲ್ಲಿ ಉಳಿದಿರುವುದು ಹೊಯ್ಸಳೇಶ್ವರ ದೇವಾಲಯ ಮಾತ್ರ. ಗಟ್ಟದಹಳ್ಳಿ ಶಾಸನ ಆಧರಿಸಿ ಈ ದೇವಾಲಯವನ್ನು ವಿಷ್ಣುವರ್ಧನನ ಅಕಾರಿ ಕೇತಮಲ್ಲ 1121ರಲ್ಲಿ ಕಟ್ಟಿಸಿದ ಎಂದು ಹೇಳಲಾಗಿದೆ.
ಕರ್ನಾಟಕದ ಪರಂಪರೆಯ ಪ್ರತೀಕವಾಗಿರುವ ಈ ದೇವಾಲಯ ಹೊಯ್ಸಳ ದೊರೆಗಳ ಕಲಾಶ್ರೀಮಂತಿಕೆಯ ದ್ಯೋತಕವಾಗಿ ಹಾಗೂ ಕಲೋಪಾಸನೆಗೆ ಸಾಕ್ಷಿಯಾಗಿವೆ. ಗಟ್ಟಿಯಾದ ಬಳಪದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯ ಅತ್ಯಂತ ವಿಸ್ತಾರವಾಗಿದ್ದು, 700 ಅಡಿಗಳಿಗೂ ಹೆಚ್ಚು ಉದ್ದವಾಗಿರುವ ಭಿತ್ತಿಗಳ ಮೇಲೆ ಸಾವಿರಾರು ದೇವತೆಗಳ ಕೆತ್ತನೆ, ಮಹಾಭಾರತ, ರಾಮಾಯಣ, ಶೈವಪುರಾಣ, ಸಮುದ್ರ ಮಂಥನದ ಉಬ್ಬುಶಿಲ್ಪಗಳಿವೆ. ಆನೆ, ಹಂಸ, ಬಳ್ಳಿ ಸುರುಳಿ,ಕುದುರೆ, ಕಥಾ ಪಟ್ಟಿಗೆಗಳು ಅತ್ಯಂತ ಮನೋಹರವಾಗಿವೆ. ಆನೆಯ ಪಟ್ಟಿಕೆಯೊಂದರಲ್ಲೇ ಸುಮಾರು 2 ಸಾವಿರ ಆನೆಗಳ ಕೆತ್ತನೆಗಳಿವೆ.
ಶಿಲಾಬಾಲಿಕೆ, ಮದನಿಕೆಯರ ಸುಂದರ ಎತ್ತರವಾದ ಹಾಗೂ ಸುಂದರವಾದ ಕೆತ್ತನಗಳಿವೆ. ನಂದಿಯ ಮೂರ್ತಿಗಳೂ ಇವೆ. ದಶಾವತಾರ, ಪಾರಿಜಾತಾಪಹರಣ, ಇಂದ್ರಸಭೆ ಮೊದಲಾದ ಕಥಾಪಟ್ಟಿಕೆಗಳು ಇಡೀ ಪುರಾಣವನ್ನೇ ಕಣ್ಣೆದುರು ತಂದು ನಿಲ್ಲಿಸುತ್ತವೆ. ಈ ಹೊಯ್ಸಳೇಶ್ವರನ ದೇಗುಲದ ಪುತ್ಥಳಿಗೂ ಭಿನ್ನವಾಗಿವೆ. ಭಗ್ನಗೊಂಡಿವೆ. ಇಲ್ಲಿರುವ ಮತ್ತೊಂದು ಮನೋಹರ ದೇಗುಲ ಕೇದಾರೇಶ್ವರ ದೇವಾಲಯ. ಬೆಳಗಾವಿಯ ದಕ್ಷಿಣ ಕೇದಾರೇಶ್ವರ ದೇವಾಲಯದಿಂದ ಸೂರ್ತಿಪಡೆದ ಹೊಯ್ಸಳರ ಎರಡನೆ ಬಲ್ಲಾಳ ಹಾಗೂ ಅವನ ಕಿರಿಯ ರಾಣಿ ಕೇತಲದೇವಿ ೧೨೧೯ರಲ್ಲಿ ಕಟ್ಟಿದರಂತೆ. ಈ ದೇಗುಲದ ಭಿತ್ತಿಗಳಲ್ಲಿರುವ ಹಂಸ ಹಾಗೂ ಮಕರ ಶಿಲ್ಪಗಳು ಅತ್ಯದ್ಭುತವಾಗಿವೆ. ದೇಗುಲದ ಬಾಗಿಲವಾಡ, ಭುವನೇಶ್ವರಿಗಳಲ್ಲಿ ರಮ್ಯ ಶಿಲ್ಪಗಳಿವೆ. ದೇಗುಲದಲ್ಲಿ ಹಲವು ವಿಗ್ರಹಗಳು ಇಲ್ಲ. ಭಿನ್ನವಾದ ವಿಗ್ರಹಗಳೀಗ ವಸ್ತುಸಂಗ್ರಹಾಲಯಗಳನ್ನು ಸೇರಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರಾಜ್ಯ ವಸ್ತು ಸಂಗ್ರಹಾಲಯ ತೆರೆದಿರುತ್ತದೆ. ಶುಕ್ರವಾರ ಮಾತ್ರ ಇದಕ್ಕೆ ರಜೆ. ಉಳಿದ ಭಿನ್ನ ವಿಗ್ರಹಗಳನ್ನು ದುರಸ್ತಿ ಮಾಡುವ ಪ್ರಯತ್ನವಂತೂ ಆಗಿದೆ. ಆದರೆ ಮೂಲ ಸೊಬಗನ್ನು ತರುವಲ್ಲಿ ಇವು ವಿಫಲವಾಗಿವೆ. ಹೊಯ್ಸಳೇಶ್ವರ ದೇಗುಲಕ್ಕೆ ಸಮೀಪದಲ್ಲೆ ಮೂರು ಬಸದಿಗಳೂ ಇವೆ. ಜೈನ, ಶೈವ ಹಾಗೂ ವೈಷ್ಣವ ಸಂಪ್ರದಾಯಗಳ ಬೀಡು ಇದೆಂಬುದನ್ನು ಇವು ನಿರೂಪಿಸುತ್ತವೆ.
ಊರಿನ ಬೆಣ್ಣೆ ಗುಡ್ಡಕ್ಕೆ ಹೊಂದಿಕೊಂಡಂತೆ ಪೂರ್ವದ ಕಡೆ ಇರುವ ವಿಶಾಲ ಬಯಲಿನಲ್ಲಿ ಹೊಯ್ಸಳರ ಅರಮನೆಯಿತ್ತು. ಈಗಲೂ ಇದನ್ನು ಅರಮನೆ ಹೊಲ ಎಂದೇ ಕರೆಯುತ್ತಾರೆ. ನಿಧಿ, ನಿಕ್ಷೇಪ ಸಿಗಬಹುದೆಂದು ಹಲವರು ಇಲ್ಲಿ ಗುಂಡಿಗಳನ್ನು ತೋಡಿದ್ದಾರೆ.
ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಹಾಸನದಿಂದ 31 ಕಿ.ಮೀ. ದೂರದಲ್ಲಿರುವ ಹಳೇಬೀಡು ಬೇಲೂರಿಗೆ ಕೇವಲ 17 ಕಿ.ಮೀಟರ್ ಅಂತರದಲ್ಲಿದೆ. ಸುತ್ತಮುತ್ತ ನೋಡಬೇಕಾದ ಸ್ಥಳಗಳೆಂದರೆ ಬೆಳವಾಡಿ, ಬಸ್ತಿಹಳ್ಳಿ, ಜೈನಬಸದಿಗಳು.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.