ಶಲಭಾಸನ ಮತ್ತು ಭುಜಂಗಾಸನಗಳ ಸಂಯುಕ್ತ ರೂಪವೇಧನುರಾಸನ. ‘ಧನುಃ’ ಎಂದರೆ ಬಿಲ್ಲು.
ಮಾಡುವ ಕ್ರಮ
1) ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಮಲಗಬೇಕು.
2) ಅನಂತರ ಎರಡೂ ಕಾಲುಗಳನ್ನು ಮಂಡಿಗಳ ಬಳಿ ಹಿಂದಕ್ಕೆ ಬಗ್ಗಿಸಬೇಕು.
3) ಹೀಗೆ ಬಗ್ಗಿಸಿದ ಕಾಲುಗಳನ್ನು ಎಡಗೈಯಿಂದ ಎಡಗಾಲ ಗಿಣ್ಣನ್ನು ಹಿಡಿದುಕೊಳ್ಳಬೇಕು.
4) ಉಸಿರನ್ನು ಸಂಪೂರ್ಣವಾಗಿ ಹೊರಗೆ ಬಿಟ್ಟು ಚಿತ್ರದಲ್ಲಿ ತೋರಿಸಿರುವಂತೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಇರುತ್ತದೆ. ಒಮ್ಮೊಮ್ಮೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತುವಲ್ಲಿ ತೊಡೆಗಳಲ್ಲಿ ಒಂದು ರೀತಿಯ ಹಿಡಿತ ಅಥವಾ ತೊಂದರೆ ಉಂಟಾಗುವುದು. ಆದ್ದರಿಂದ ನಿಧಾನವಾಗಿ ಕಾಲುಗಳನ್ನು ಮೇಲಕ್ಕೆ ಎತ್ತುವುದನ್ನು ಅಭ್ಯಾಸ ಮಾಡುವುದು ಉತ್ತಮ. ಧನುರಾಸನದ ಪೂರ್ಣವಸ್ಥೆಯಲ್ಲಿ ಶರೀರವು ಬಿಲ್ಲಿನಂತೆ ಬಗ್ಗಿರುತ್ತದೆ.
ಧನುರಾಸನದಲ್ಲಿ ಪಾರ್ಶ್ಚಾಧನುರಾಸನ ಹಾಗೂ ಧನುರಾಸನ ಕ್ರಿಯಾ ಎಂಬ ಎರಡು ವ್ಯತ್ಯಸ್ತ ಭಂಗಿಗಳೂ ಇವೆ. ಇಡೀ ಶರೀರದ ಭಾರವನ್ನು ಎಡ ಭಾಗದ ಮೇಲೆ ಹಾಕಿದಲ್ಲಿ ಅದು ಪಾರ್ಶ್ವಧನುರಾಸನವಾಗುತ್ತದೆ. ಈ ಸ್ಥಿತಿಯಲ್ಲಿ ಶರೀರವು ಎಡ ಭಾಗಕ್ಕೆ ವಾಲಿರುತ್ತದೆ. ಹಾಗೆಯೇ ಇದನ್ನು ಬಲಪಾರ್ಶ್ವದ ಮೇಲೂ ಮಾಡಬಹುದು. ‘ಧನುರಾಸನ ಕ್ರಿಯಾ’ ಎಂದರೆ ಯೋಗಾಭ್ಯಾಸಿಯು ಧನುರಾಸನದಲ್ಲಿದ್ದು, ಅದೇ ಸ್ಥಿತಿಯಲ್ಲಿ –ಮಕ್ಕಳ ಆಟದ ಕುದುರೆಯಂತೆ – ಹಿಂದಕ್ಕೂ ಮುಂದಕ್ಕೂ ತೂಗಾಡಿದರೆ ಅದು ಧನುರಾಸನ ಕ್ರಿಯೆಯಾಗುತ್ತದೆ.
ಲಾಭಗಳು: ಧನುರಾಸನ ಅಭ್ಯಾಸದಿಂದ ಎದೆ, ಹೃದಯ, ಹೊಟ್ಟೆ ಮತ್ತು ಶ್ವಾಸಕೋಶಗಳು ಬಲಿಷ್ಠವಾಗುವುವು. ಬೆನ್ನುಮೂಳೆಯು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಪಡೆಯುವುದು. ಜಠರಾಗ್ನಿಯು ಹೆಚ್ಚು ಉದ್ದೀಪನಗೊಳ್ಳುತ್ತದೆ. ಜೀರ್ಣಶಕ್ತಿಯೂ ಹೆಚ್ಚುವುದು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.