ದ್ವಿಪಾದ ಕಂದರಾಸನಕ್ಕೆ ದ್ವಿಪಾದ ಶೀರ್ಷಾಸನ ಎಂಬ ಹೆಸರೂ ಇದೆ.
ಮಾಡುವ ಕ್ರಮ:
1) ಪ್ರಾರಂಭದಲ್ಲಿ ಯೋಗಾಭ್ಯಾಸಿಯೂ ತನ್ನ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ನೆಲದ ಮೇಲೆ ಕುಳಿತುಕೊಳ್ಳಬೇಕು.
2) ಅನಂತರ ಯಾವುದಾದರೂ ಒಂದು ಕಾಲನ್ನು (ಯೋಗಾಸನ ಕ್ರ. 38ರಲ್ಲಿ ವಿವರಿಸಿದಂತೆ) ನಿಧಾನವಾಗಿ ನೆಲದಿಂದ ಮೇಲಕ್ಕೆ ಎತ್ತಿ, ಮಂಡಿಯ ಬಳಿ ಬಗ್ಗಿಸಿ, ಕುತ್ತಿಗೆಯ ಹಿಂಬದಿಯಲ್ಲಿಡಬೇಕು. ಈ ಸ್ಥಿತಿಯಲ್ಲಿ ಎರಡೂ ಕಾಲುಗಳು ಬೆನ್ನ ಮೇಲೆ ಒಂದನ್ನೊಂದು ಛೇದಿಸಿರುತ್ತವೆ ಹಾಗೂ ಕಾಲುಗಳ ಪಾದಗಳೆರಡೂ ಚಿತ್ರದಲ್ಲಿರುವಂತೆ ಕಾಣುತ್ತವೆ. ಈ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು ಕಷ್ಟ. ನಿಧಾನವಾಗಿ ಸಮತೋಲನ ಪಡೆದನಂತರ ಕೈಗಳಿಂದ ನಮಸ್ಕಾರ ಮುದ್ರೆ ಮಾಡಬೇಕು ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಕೇವಲ ಪೃಷ್ಠಭಾರದ ಮೇಲೆ ಬಿದ್ದಿರುತ್ತದೆ.
ಲಾಭಗಳು:
ದ್ವಿಪಾದ ಕಂದರಾಸನದ ಅಭ್ಯಾಸದಿಂದ ತೊಡೆಗಳು, ಕತ್ತು, ಸೊಂಟ ಬಲಗೊಳ್ಳುವವು. ಹೃದಯ – ಶ್ವಾಸಕೋಶಗಳು ಹೆಚ್ಚು ಸುದೃಢಗೊಳ್ಳುವವು. ಕಿಬ್ಬೊಟ್ಟೆಯ ಅನೇಕ ದೋಷಗಳು ದೂರವಾಗುವವು. ಮೂಳೆ ರೋಗದವರಿಗೆ ಈ ಆಸನ ಹೆಚ್ಚು ಉಪಕಾರಿ, ಆದರೆ ಅಂತಹವರು ಬಹಳ ಎಚ್ಚರಿಕೆಯಿಂದ ಅಭ್ಯಾಸ ಮಾಡಬೇಕಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.