ಮನೆ ರಾಜಕೀಯ ಸರ್ವ ಜನಾಂಗದ ಶಾಂತಿಯ ತೋಟ: ಭಾವೈಕ್ಯತೆ ಚರ್ಚೆಯಲ್ಲಿ ಹೆಚ್ ಡಿಕೆ ಭಾಗಿ

ಸರ್ವ ಜನಾಂಗದ ಶಾಂತಿಯ ತೋಟ: ಭಾವೈಕ್ಯತೆ ಚರ್ಚೆಯಲ್ಲಿ ಹೆಚ್ ಡಿಕೆ ಭಾಗಿ

0

ಮೈಸೂರು(Mysuru): ಲೋಕನಾಯಕ ಜೆ.ಪಿ. ವಿಚಾರ ವೇದಿಕೆಯು ಇಂದು ನಗರದ ಕಲಾಮಂದಿರದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ ಒಂದು ಭಾವೈಕ್ಯತೆಯ ಚರ್ಚೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಹಿತಿ ಡಾ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ(H D Kumarswamy), ಮುಖಂಡ ಸಿ.ಎಂ.ಇಬ್ರಾಹಿಂ, ಇತಿಹಾಸತಜ್ಞ ಪಿ.ವಿ.ನಂಜರಾಜೇ ಅರಸ್, ಪತ್ರಕರ್ತ ಬಿ.ಎಂ.ಹನೀಫ್ ಪಾಲ್ಗೊಂಡಿದ್ದಾರೆ.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ‘ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಅಗತ್ಯವಾಗಿದ್ದು, ಅದರ ನೇತೃತ್ವವನ್ನು ಎಚ್.ಡಿ.ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ’ ಎಂದರು.