ಮನೆ ರಾಜ್ಯ ಕುಮಾರಸ್ವಾಮಿ ತಾಕತ್ ಇದ್ರೆ ಪೆನ್ ​ಡ್ರೈವ್ ನಲ್ಲಿ ಏನಿದೆ ಎಂಬುದನ್ನು ತೋರಿಸಲಿ: ಕೆ.ಎನ್. ರಾಜಣ್ಣ

ಕುಮಾರಸ್ವಾಮಿ ತಾಕತ್ ಇದ್ರೆ ಪೆನ್ ​ಡ್ರೈವ್ ನಲ್ಲಿ ಏನಿದೆ ಎಂಬುದನ್ನು ತೋರಿಸಲಿ: ಕೆ.ಎನ್. ರಾಜಣ್ಣ

0

ಮೈಸೂರು: ಕುಮಾರಸ್ವಾಮಿಯವರಿಗೆ ತಾಕತ್​ ಇದ್ರೆ ಪೆನ್ ​ಡ್ರೈವ್ ನಲ್ಲಿ ಏನಿದೆ ಎಂಬುದನ್ನು ತೋರಿಸಲಿ ಎಂದು ಸಹಕಾರ ಸಚಿವ ಕೆ.ಎನ್​. ರಾಜಣ್ಣ ಸವಾಲೆಸೆದಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಪೆನ್​ ಡ್ರೈವ್​ ಹೆಸರಿನಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪರಿಸ್ಥಿತಿ ಹೇಗಾಗಿದೆ ಎಂದರೆ ಕುಮಾರಸ್ವಾಮಿ ಅವರು ಪೆನ್ ​ಡ್ರೈವ್​ ಇಟ್ಟುಕೊಂಡು ದಂಧೆ ಮಾಡುತ್ತಿದ್ದಾರೆ. ಸುಮ್ಮನೆ ಈ ರೀತಿ ಹೇಳುವ ಬದಲು ಅದರಲ್ಲಿ ಏನಿದೆ ಎಂಬುದನ್ನು ಜನತೆಗೆ ತೋರಿಸಲಿ. ಅವರ ಪರಿಸ್ಥಿತಿ ಹೇಗಾಗಿದೆ ಎಂದರೆ ಜಾತ್ರೆಗಳಲ್ಲಿ ಬುಟ್ಟಿ ಹಿಡಿದುಕೊಂದು ಹಾವಿದೆ ಹಾವಿದೆ ಎಂದು ಹೇಳುತ್ತಾರಲ್ಲ ಹಾಗಾಗಿದೆ ಎಂದು ಟೀಕಿಸಿದ್ದಾರೆ.

ಅವರ ಬಳಿ ಇರುವ ಬುಟ್ಟಿಯಲ್ಲಿ ಯಾವ ಹಾವು ಇಲ್ಲ ಸುಮ್ಮನೆ ಪೆನ್ ​ಡ್ರೈವ್​ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಒಂದು ವೇಳೆ ಅಂತಹ ಮಹತ್ವದ ವಿಚಾರ ಇದ್ದರೂ ಸಹ ಬಿಡುಗಡೆ ಮಾಡುವ ವಿಚಾರದಲ್ಲಿ ತಡ ಯಾಕೆ ಮಾಡುತ್ತಿದ್ದೀರಾ. ಈ ವಿವಾದದಲ್ಲಿ ನನಗೆ ಯಾವುದೇ ಕುತೂಹಲ ಇಲ್ಲ ಮುಂದೆ ಈ ಬಗ್ಗೆ ಗುತ್ತಾಗುತ್ತದೆ ಎಂದು ಹೇಳಿದ್ದಾರೆ.