ಕುಷ್ಟಗಿ: ಸ್ಕೂಲ್ ಗೆ ಹೊರಟ ಅಕ್ಕ ನಿಗೆ ಟಾಟಾ ಹೇಳಲು ಬಂದಿದ್ದ ಮೂರು ವರ್ಷದ ಬಾಲಕಿ, ಸ್ಕೂಲ್ ಬಸ್ ನ ಚಕ್ರದ ಅಡಿಗೆ ಸಿಲುಕಿ ದಾರುಣ ಸಾವಿಗೀಡಾದ ಘಟನೆ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ.
ಗೋತಗಿ ಗ್ರಾಮದ ಬಸವರಾಜ ಬಾವಿಕಟ್ಟಿ ಮೂವರು ಪುತ್ರಿಯರಲ್ಲಿ ಇಬ್ಬರು ಪುತ್ರಿಯರನ್ನು 5 ಕಿ.ಮೀ. ದೂರದ ಹಿರೇ ಓತಗೇರಿ ಗ್ರಾಮದ ( ಹುನಗುಂದ ತಾಲೂಕು) ಜ್ಞಾನಮಂದಿರ ಶಾಲೆಗೆ ಸೇರಿಸಿದ್ದರು. ಎಂದಿನಂತೆ ಶನಿವಾರ 7 ಗಂಟೆಗೆ ಗೋತಗಿ ಗ್ರಾಮದ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಬಂದಿತ್ತು. ತನ್ನ ಅಕ್ಕಂದಿರಿಗೆ ಟಾಟಾ ಹೇಳಲು ಬಾಲಕಿ ಚೈತ್ರಾ ಬಂದಿದ್ದಳು.
ಈ ಬಾಲಕಿಯರಿಗೆ ತಂಗಿ ಚೈತ್ರಾ ಹಿಂಬಾಲಿಸಿರುವುದು ಗೊತ್ತಿರಲಿಲ್ಲ ಹಾಗೆಯೇ ಅವಸರದಿಂದ ಸ್ಕೂಲ್ ಬಸ್ಸನ್ನೇರಿದ್ದರು. ಬಸ್ಸಿನ ಚಾಲಕ ಮಿರರ್ ಗಮನಿಸದೇ ಬಸ್ ಬಿಟ್ಟಿದ್ದರಿಂದ ಕೆಳಗೆ ನಿಂತಿದ್ದ ಬಾಲಕಿಯ ಮೇಲೆ ಹರಿದಿದೆ. ಕ್ಷಣಾರ್ಧದಲ್ಲಿ ಬಾಲಕಿಯ ಪ್ರಾಣ ಹಾರಿ ಹೋಗಿದೆ.
ಸ್ಥಳೀಯರು ರೊಚ್ಚಿಗೆದ್ದು ಚಾಲಕ ಹಾಗೂ ಕ್ಲೀನರ್ ಗೆ ಧರ್ಮದೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಕಿ ಚೈತ್ರಾಳ ಶವವನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಸ್ಕೂಲ್ ಬಸ್ ಚಾಲಕ ಪ್ರವೀಣ ಕಂದಕೂರು ಹಾಗೂ ಕ್ಲೀನರ್ ವಿರುದ್ದ ಕುಷ್ಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.