ಮನೆ ಅಪರಾಧ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಶವದ ತುಂಡಾದ ಭಾಗಗಳು ಕೊಳವೆ ಬಾವಿಯಲ್ಲಿ ಪತ್ತೆ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಶವದ ತುಂಡಾದ ಭಾಗಗಳು ಕೊಳವೆ ಬಾವಿಯಲ್ಲಿ ಪತ್ತೆ

0

ಕಟಕಬಾವಿ (ಬೆಳಗಾವಿ ಜಿಲ್ಲೆ): ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಶವದ ತುಂಡಾದ ಭಾಗಗಳನ್ನು ರಾಯಬಾಗ ತಾಲ್ಲೂಕಿನ ಕಟಕಬಾವಿಯ ಕೊಳವೆಬಾವಿಯಿಂದ ಶನಿವಾರ ಮಧ್ಯಾಹ್ನ ಹೊರತೆಗೆಯಲಾಗಿದೆ.

Join Our Whatsapp Group

ಆರೋಪಿಗಳು ಶವವನ್ನು ತುಂಡುತುಂಡಾಗಿ ಕತ್ತರಿಸಿ ಬಟ್ಟೆಯಲ್ಲಿ ಸುತ್ತಿ, ಚೀಲದೊಳಗೆ ಇಟ್ಟು ಕೊಳವೆಬಾವಿಯಲ್ಲಿ ಹಾಕಿದ್ದರು. ಶವದ ವಾಸನೆ ಬರದಂತೆ ಮಾಡಲು ಕೊಳವೆಬಾವಿಯಲ್ಲಿ ಮಣ್ಣು ತುರುಕಿ ಮುಚ್ಚಿದ್ದರು. ಸತತ 10 ತಾಸು ಕಾರ್ಯಾಚರಣೆ ನಡೆಸಿದ ಪೊಲೀಸರು ಶವದ ಭಾಗಗಳನ್ನು ಹೊರತೆಗೆದರು.

ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಕೂಡ ಧಾವಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ. ಮುನಿಗಳ ಆಶ್ರಮ ಇರುವ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಹಾಗೂ ಶವ ಸಿಕ್ಕ ಕಟಕಬಾವಿಯಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.