ಮನೆ ಅಪರಾಧ ಶ್ರೀರಂಗಪಟ್ಟಣ: ಪತ್ನಿಯನ್ನು ಹತ್ಯೆಗೈದ ಪತಿ ಬಂಧನ

ಶ್ರೀರಂಗಪಟ್ಟಣ: ಪತ್ನಿಯನ್ನು ಹತ್ಯೆಗೈದ ಪತಿ ಬಂಧನ

0

ಶ್ರೀರಂಗಪಟ್ಟಣ: ಕ್ಷುಲಕ ಕಾರಣಕ್ಕೆ ಪತ್ನಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಕೆಆರ್’ಎಸ್. ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಹೂಸಸಾಯಪನಹಳ್ಳಿಯ ಸುಬ್ರಮಣ್ಯಾ ಬೆಟ್ಟದ ನಿವಾಸಿ ಗೌತಮ್ (24) ಬಂಧಿತ ಆರೋಪಿ.  ಈತ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿ ವರ್ಷಿತಾಳೊಂದಿಗೆ ಜಗಳವಾಡುತ್ತಿದ್ದ ವೇಳೆ ಆಕೆಯನ್ನು ಜೋರಾಗಿ ತಳ್ಳಿದ ಪರಿಣಾಮ ತಲೆ ಗೋಡೆಗೆ  ಹೊಡೆದು ವರ್ಷಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳೆ ಗೌತಮ್ ಪರಾರಿಯಾಗಿದ್ದ. ಈ ಸಂಬಂಧ ಕೆ.ಆರ್.ಎಸ್. ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗೌತಮ್ ಅರಳಕುಪ್ಪೆ ಗ್ರಾಮದ ಬಳಿ ಇರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಶನಿವಾರ ರಾತ್ರಿ ಆತನನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ಎಸ್ಪಿ ಯತೀಶ್, ಡಿವೈಎಸ್ಪಿ ಮುರಳಿ ಮಾರ್ಗದರ್ಶನದಲ್ಲಿ ಕೆ.ಆರ್.ಎಸ್. ಠಾಣೆ  ಸಿಪಿಐ ಪುನೀತ್, ಎಸ್ ಐ ಬಸವರಾಜು , ಎ ಎಸ್ ಐ ನಟರಾಜು, ಸಿಬ್ಬಂದಿಗಳಾದ ಸತೀಶ, ಶ್ರೀಧರ , ರವೀಶ್, ಪ್ರಭುಸ್ವಾಮಿ, ಮಂಜುನಾಥ್, ದೇವರಾಜು, ಮಂಜೇಗೌಡ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.