ಮನೆ ರಾಜ್ಯ ನಮೆಲ್ಲರ  ಕನಸು, ನಿರೀಕ್ಷೆಗಳು  ಚಂದ್ರನೆಡೆಗೆ  ಸಾಗುತ್ತಿವೆ

ನಮೆಲ್ಲರ  ಕನಸು, ನಿರೀಕ್ಷೆಗಳು  ಚಂದ್ರನೆಡೆಗೆ  ಸಾಗುತ್ತಿವೆ

0

ಇಸ್ರೋ  ವಿಜ್ಞಾನಿಗಳನ್ನು  ಅಭಿನಂದಿಸಿದ  ಹೆಚ್.ಡಿ.ಕುಮಾರಸ್ವಾಮಿ

Join Our Whatsapp Group

ಬೆಂಗಳೂರು: ಚಂದ್ರಯಾನ-3ರ  ನೌಕೆಯನ್ನು  ಉಡಾವಣೆ ಮಾಡಿ  ಯಶಸ್ವಿಯಾಗಿ  ಕಕ್ಷೆಗೆ ಸೇರ್ಪಡೆ ಮಾಡಿದ  ಇಸ್ರೋ ಸಂಸ್ಥೆಯನ್ನು  ಹಾಗೂ  ಬಾಹ್ಯಾಕಾಶ  ವಿಜ್ಞಾನಿಗಳನ್ನು  ಮಾಜಿ  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಅವರು  ಅಭಿನಂದಿಸಿದ್ದಾರೆ.

ಈ  ಬಗ್ಗೆ  ಮಾಧ್ಯಮ  ಹೇಳಿಕೆ  ಬಿಡುಗಡೆ  ಮಾಡಿರುವ  ಅವರು;  ನಮೆಲ್ಲರ  ಕನಸು, ನಿ ರೀಕ್ಷೆಗಳು ಚಂದ್ರನೆಡೆಗೆ  ಸಾಗುತ್ತಿವೆ.

ಇಡೀ  ದೇಶವೇ  ಹೆಮ್ಮೆಪಡುತ್ತದೆ.  45 ದಿನಗಳ  ಐತಿಹಾಸಿಕ  ಚಂದ್ರಯಾನ-3  ಯಶಸ್ವಿಯಾಗಿ ಆರಂಭವಾಗಿದೆ.  ಅಪರಾಹ್ನ 2.35ಕ್ಕೆ  ಆಂಧ್ರಪ್ರದೇಶದ  ಶ್ರೀಹರಿಕೋಟಾದಿಂದ  ಚಂದಿರನ  ಅಂಗಳಕ್ಕೆ ನೌಕೆಯನ್ನು  ಉಡ್ದಯನ  ಮಾಡಿದ  ಇಸ್ರೋ,  ಈ  ಪ್ರಯತ್ನದಲ್ಲಿ  ಸಂಪೂರ್ಣ  ಯಶಸ್ಸು  ಸಾಧಿಸಲಿದೆ ಎಂಬ  ವಿಶ್ವಾಸ  ನನ್ನದು  ಎಂದು  ಸಂತಸ  ವ್ಯಕ್ತಪಡಿಸಿದ್ದಾರೆ.

ಇಸ್ರೋದ  ಪ್ರತಿ  ಯೋಜನೆಗೂ  ಕರ್ನಾಟಕದ  ಕೊಡುಗೆ  ಇರುತ್ತದೆ.  ಅದೇ ರೀತಿ,  ಚಂದ್ರಯಾನ-3ಕ್ಕೂ ಕರುನಾಡಿನ  ಕಾಣಿಕೆ  ಅಪಾರ.  ಜಗತ್ತು  ಭಾರತವನ್ನು  ಕರ್ನಾಟಕದ  ಮೂಲಕ  ನೋಡುವ  ಈ ಅವಿಸ್ಮರಣೀಯ  ಕ್ಷಣವನ್ನು  ದೃಶ್ಯ ಮಾಧ್ಯಮದ  ಮೂಲಕ  ನಾನೂ  ಕಣ್ತುಂಬಿಕೊಂಡೆ  ಎಂದಿದ್ದಾರೆ ಅವರು.

ಉಡಾವಣೆಯಾದ  ಕೆಲ  ಕ್ಷಣಗಳಲ್ಲೇ  ಚಂದ್ರಯಾನ-3  ನೌಕೆ  ನಿಗದಿತ  ಕಕ್ಷೆ  ಸೇರಿದ್ದು,  ಈ  ಮೂಲಕ ಉಪಗ್ರಹವನ್ನು  ಚಂದ್ರನ  ಮೇಲೆ  ಇಳಿಸುವ  6 ವಾರಗಳ  ರೋಮಾಂಚನಕಾರಿ  ಮಿಷನ್’ಗೆ  ಚಾಲನೆ ದೊರೆತಿದೆ.  ಇಸ್ರೋ  ಅಧ್ಯಕ್ಷ  ಡಾ.ಸೋಮನಾಥ್  ಸೇರಿ  ಅವರ  ತಂಡದ  ಎಲ್ಲಾ  ವಿಜ್ಞಾನಿಗಳು, ತಾಂತ್ರಿಕ  ನಿಪುಣರು,  ಇತರೆ  ಎಲ್ಲರಿಗೂ  ನನ್ನ  ಹೃತ್ಪೂರ್ವಕ  ಅಭಿನಂದನೆಗಳು  ಎಂದು  ಮಾಜಿ ಮುಖ್ಯಮಂತ್ರಿ  ಅವರು  ಹೇಳಿದ್ದಾರೆ.