ಮನೆ ರಾಜ್ಯ ಮನೆ ಬಾಗಿಲ ಲಾಕ್ ಮುರಿದು 7 ಲಕ್ಷ ಮೌಲ್ಯದ  ನಗದು, ಚಿನ್ನಾಭರಣ ಕಳವು

ಮನೆ ಬಾಗಿಲ ಲಾಕ್ ಮುರಿದು 7 ಲಕ್ಷ ಮೌಲ್ಯದ  ನಗದು, ಚಿನ್ನಾಭರಣ ಕಳವು

0
ಸಾಂದರ್ಭಿಕ ಚಿತ್ರ

ಮೈಸೂರು:  ಮನೆಯ ಬಾಗಿಲಿನ ಇನ್ನರ್ ಲಾಕ್ ಮುರಿದು 7 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ್ 1ನೇ ಹಂತದಲ್ಲಿ ನಡೆದಿದೆ.

Join Our Whatsapp Group

ಇಲಿನ ನಿವಾಸಿ, ವರ್ತಕ ಆರ್.ಎ. ತೇಜಸ್ ಪಟೇಲ್  ಹಣ ಮತ್ತು ಚಿನ್ನಾಭರಣ ಕಳೆದು ಕೊಂಡವರಾಗಿದ್ದು,  ಇವರು  ಬೆಂಗಳೂರಿನಲ್ಲಿ ವಾಸವಿದ್ದು, ಹೆಬ್ಬಾಳ್ ನ ಸ್ವಂತ ಮನೆಗೆ ಆಗಾಗ ಬಂದು ಹೋಗುತ್ತಿದ್ದರು.  ಇವರ ಅಕ್ಕ ದಿವ್ಯಾ ಅವರು ಹುಣಸೂರು ತಾಲೂಕು ಗೆರಸನ ಹಳ್ಳಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದು, ಅಲ್ಲೇ ವಾಸವಿದ್ದರು. ಆಗಿಂದಾಗ್ಗೆ ಹೆಬ್ಬಾಳ್ ಮನೆಗೆ ಬಂದು –ಹೋಗುತ್ತಿದ್ದರು. ಈ ಕುಟುಂಬದವರು ಹಣ ಮತ್ತು ಚಿನ್ನಾಭರಣವನ್ನು ಈ ಮನೆಯಲ್ಲೇ ಇಟ್ಟಿದ್ದರು.

ಕಳೆದ ಜುಲೈ 10 ರಂದು ತೇಜಸ್ ಪಟೇಲ್, ಅವರ ತಾಯಿ ಸುಶೀಲ ಮತ್ತು ಅಕ್ಕ ದಿವ್ಯಾ ಅವರು ಹೆಬ್ಬಾಳ್ ಮನೆಗೆ ಬಂದು- ಹೋಗಿದ್ದರು.  ಜುಲೈ 18 ರಂದು ಇವರ ಪಕ್ಕದ ಮನೆಯಲ್ಲಿರುವ ಗೀತಾ ಎಂಬುವವರು ಮನೆ ಬಾಗಿಲು ತೆರೆದಿರುವುದಾಗಿ ಮೊಬೈಲ್ ಮೂಲಕ ತಿಳಿಸಿದ್ದಾರೆ.

ತೇಜಸ್ ಪಟೇಲ್ ಆಗಮಿಸಿ, ಪರಿಶೀಲಿಸಿದಾಗ ಖದೀಮರು ಮನೆಯ ಇನ್ನರ್ ಲಾಕ್ ಮುರಿದು, ಬೀರುವಿನ ಬಾಗಿಲು ಮೀಟಿ ಅಲ್ಲಿದ್ದ 7 ಲಕ್ಷ ರೂ. ನಗದು ಮತ್ತು 56 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಹೆಬ್ಬಾಳ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.