ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗಂಡಾಳು ಅಳುತ್ತಾ ಯಜಮಾನರ ಕಡೆಗೆ ಬಂದು “ಸಾಹೇಬರೇ ಅಮ್ಮಾವರು ನನ್ನ ಕೆನ್ನಗೆ ಬಾರಿಸಿಬಿಟ್ಟರು–

ಅಳು ಬರುತ್ತಿದೆ” ಎಂದ. ಸಾಹೇಬರು “ಅದಕ್ಯಾಕೆ ಅಳಬೇಕು ನಾನೆಂದಾದರೂ ಅತ್ತಿದ್ದನ್ನು ನೀನು ಕಂಡಿದ್ದೀಯಾ?”

***

Join Our Whatsapp Group

ರಸ್ತೆಯೊಂದರಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿತ್ತು. ಜನಸಂದಣಿ ಸೇರಿತ್ತು. ಪತ್ರಿಕೆ ವರದಿಗಾರ ಅಪಘಾತದ ವಿವರ ತಿಳಿಯಲು ಅಲ್ಲಿಗೆ ಬಂದ. ಆದರೆ ಆ ಜನಸಂದಣಿಯಲ್ಲಿ ಕಾರು ಬಳಿಗೆ ಬರಲಾಗಲೇ ಇಲ್ಲ. ಕೂಡಲೇ ಆ ತರುಣ `ದಾರಿ ಬಿಡಿ ದಾರಿ ಬಿಡಿ’ ನನ್ನ ತಂದೆಗೆ ಕಾರು ಆಪಘಾತವಾಗಿದೆ ಎಂದು ಕೂಗಿಕೊಳ್ಳುತ್ತಾ ಜನರಿಂದ ಜಾಗ ಬಿಡಿಸಿಕೊಂಡು ಮುಂದೆ ಹೋದ. ಪೆಟ್ಟು ತಿಂದು ಕಾರಿನ ಮುಂದೆ ಬಿದ್ದು ಕೊಂಡಿದ್ದುದು ಒಂದು ಕತ್ತೆ!