ಮನೆ ಅಪರಾಧ ತಿರುಪತಿಯಲ್ಲಿ ಕಾಲ್ತುಳಿತ: ಮೂವರಿಗೆ ಗಾಯ

ತಿರುಪತಿಯಲ್ಲಿ ಕಾಲ್ತುಳಿತ: ಮೂವರಿಗೆ ಗಾಯ

0

ಹೈದರಾಬಾದ್‌(Hydarabad): ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಾಲಯದ(tirumala temple) ಸಮೀಪ ಸರ್ವದರ್ಶನ ಟಿಕೆಟ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ  ಕಾರಣ ನಡೆದ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.

ಟಿಕೆಟ್‌ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಟಿಕೆಟ್‌ ಕೌಂಟರ್‌ ಬಳಿ ಜಮಾಯಿಸಿದ್ದರಿಂದ ಈ ಘಟನೆ ಸಂಭವಿಸಿರುವುದಾಗಿ ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ನೂಕಾಟ, ತಳ್ಳಾಟ ನಡೆದಿರುವುದು ಕೆಲವು ವಿಡಿಯೊಗಳಲ್ಲಿ ದಾಖಲಾಗಿದೆ. ಪೊಲೀಸ್‌ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಮಕ್ಕಳು ಸೇರಿದಂತೆ ನೆರೆದಿದ್ದ ಭಕ್ತಾದಿಗಳ ಅಳು, ಚೀರಾಟ ಕೇಳಿತು. ಪೊಲೀಸರು ಗುಂಪು ನಿಯಂತ್ರಿಸಲು ಮುಂದಾಗುತ್ತಿದ್ದಂತೆ ಜನರು ಆತಂಕದಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಿದರು ಎಂದು ವರದಿ ಮಾಡಿದೆ.