ದೇಹಕ್ಕೆ ಹಾನಿಯುಂಟುಮಾಡುವ ಸೂಕ್ಷ್ಮಜೀವಿ (Pathogens)ಗಳು ಶರೀರವನ್ನು ಪ್ರವೇಶಿಸಿದಾಗ ಸೋಂಕು (Infection) ಉಂಟಾಗುತ್ತದೆ.
Pathogens ಈ ಸೂಕ್ಷ್ಮ ಜೀವಿಗಳು ಈ ಕೆಳಗಿನಂತಿರುತ್ತವೆ.
• ಬ್ಯಾಕ್ಟೀರಿಯಾ (Bacteria)
• ವೈರಸ್ (Viruses)
• ಪ್ರೋಟೋಜೋವ (Protozoa)
• ರಿಕೆಟ್ಸ್ ಯ್ (Reckttseia)
• ಫಂಗಸ್ (Fungi)
• ಹುಳುಗಳು (Worms)
ಈ ಎಲ್ಲಾ ಸೂಕ್ಷ್ಮ ಜೀವಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಲವು ರೀತಿಯಲ್ಲಿ ಸೋಂಕಿನ ರೂಪದಲ್ಲಿ ಹರಡುತ್ತವೆ. ಉದಾಹರಣೆಗೆ.
● ಒಬ್ಬ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಗಾಳಿಯಲ್ಲಿ ಹರಡುವ ತುಂತುರುಗಳು ಇನ್ನೊಬ್ಬ ವ್ಯಕ್ತಿಯನ್ನು ತಲುಪಿದಾಗ, ಅವನಿಗೆ ಈ ಸೋಂಕು ಉಂಟಾಗಬಹುದು.
● ಕೆಲವು ಜೀವನಗಳು ಮುತ್ತು ಕೊಟ್ಟಾಗ ಅಥವಾ ಸಂಭೋಗದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ.
● ಸೊಳ್ಳೆಗಳಿಂದ ಪ್ರೋಟೋಜೋವ ತರಹದ Plasmodium ಎಂದು ಕರೆಯಲ್ಪಡುವ ಮಲೇರಿಯಾ ರೋಗಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ.
● ಪಕ್ಷಿಗಳು, ಕೋಳಿಗಳಿಂದ Psittacosis ಎಂಬ ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ.
● ಕಲುಷಿತ ಆಹಾರ, ನೀರು, ಮಣ್ಣುಗಳಲ್ಲಿ ಕೆಲವು ವಿಷಕಾರಿ ಜೀವಾಣುಗಳಿರುತ್ತವೆ. ಇವು ಬಾಯಿಂದ ಶರೀರದ ಹೊರ ಗಾಯಗಳಿಂದ ಪ್ರವೇಶಿಸುತ್ತದೆ.
● ಕೆಲವು ಜೀವಾಣುಗಳು ತಾಯಿಯಿಂದ ಗರ್ಭಧಾರಣೆ ಸಮಯದಲ್ಲೂ, ಪ್ರಸವದ ಸಮಯದಲ್ಲೂ ಮಕ್ಕಳಿಗೆ ಬರಬಹುದು.
● ಅಂಟುರೋಗಗಳು ಹರಡುವ ಮಾರ್ಗಗಳು: ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಂಟುರೋಗಗಳು ಲೈಂಗಿಕತೆಯಿಂದ, ಗಾಳಿಯಿಂದ, ರಕ್ತದಿಂದ ಅಥವಾ ಸ್ಪರ್ಶದಿಂದ ಹರಡುತ್ತವೆ.
● ಹಿಂದುಳಿದ ದೇಶಗಳಲ್ಲಿ ಕ್ರಿಮಿಕೀಟ, ಆಹಾರ, ನೀರು ಮತ್ತು ಇತರ ವಿಧಗಳಿಂದ ಹೊರಡುತ್ತವೆ.
ರೋಗಕ್ಕೆ ಪಕ್ವತೆಯ ಅವಧಿ (INCUBATION PERIOD)
● ಹಾನಿಕಾರಕ ಬ್ಯಾಕ್ಟೀರಿಯಗಳು ಒಂದು ಬಾರಿ ಶರೀರದಲ್ಲಿ ಪ್ರವೇಶಿಸಿದ ನಂತರ ಅವುಗಳ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುತ್ತದೆ. ಹೀಗೆ ವೃದ್ಧಿಯಾದ ನಂತರ ತಮ್ಮ ಪ್ರಭಾವ ಬೀರಲು ರೋಗ ಲಕ್ಷಣಗಳನ್ನು ತೋರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.
● ಕ್ರಿಮಿಗಳು ಶರೀರ ಪ್ರವೇಶಿಸಿ ರೋಗದ ಲಕ್ಷಣಗಳ ಮುನ್ಸೂಚನೆಯನ್ನು ತಿಳಿಸುವ ಕಾಲವನ್ನು “ರೋಗ ಪಕ್ವತೆ ಅವಧಿ” ಎನ್ನುತ್ತಾರೆ.
● ರೋಗ ಪಕ್ವತೆಯ ಅವಧಿ ಕಾಲರಾದಂತಹ ವ್ಯಾಧಿಗಳಿಗೆ ಕೆಲವು ಗಂಟೆಗಳು ಬೇಕಾದರೆ, ಪಿತ್ತ ಜನಕಾಂಗದ ಮೇಲೆ ಪರಿಣಾಮ ಬೀರುವ ಹೆಪಟೈಟಿಸ್ ರೋಗಗಳಿಗೆ ಐದು ತಿಂಗಳು ಬೇಕು.
● ಅಂಟುರೋಗ ಸುಂಕದ ವ್ಯಕ್ತಿಯ ಸೋಂಕಿನ ಮೇಲೆ ದಾಳಿ ನಡೆಸಲು ಶರೀರವು ಆ್ಯಂಟಿಬಾಡೀಸ್ ಗಳನ್ನು ಉತ್ಪಾದಿಸುತ್ತದೆ.
● ಆ ವ್ಯಕ್ತಿ ರೋಗದಿಂದ ಮುಕ್ತನಾದರೂ, ರೋಗನಿರೋಧಕ ಶಕ್ತಿಯನ್ನು ನೀಡುವುದಲ್ಲದೆ, ಮತ್ತೆ ಕ್ರಿಮಿಗಳು ಆಕ್ರಮಿಸಿದರೆ ಹೋರಾಡುವ ಶಕ್ತಿಯನ್ನು ಹೊಂದಿರುತ್ತದೆ.
ಶರೀರದಲ್ಲಿ ಹಲವಾರು ರೋಗಗಳೊಂದಿಗೆ ಹೋರಾಡುವ ಆ್ಯಂಟಿಬಾಡಿಸ್ ಅನ್ನು ಕೃತಕವಾಗಿ ತಯಾರಿಸಿ ಲಸಿಕೆಗಳ(Vaccine) ಮೂಲಕ ನೀಡುತ್ತಾರೆ.
ಲಸಿಕೆಗಳ ಮೂಲ ತತ್ವಗಳು
● ನಿಶ್ಚಿತ ರೋಗಕ್ಕೆ ಸಂಬಂಧಿಸಿದ ಲಸಿಕೆಯು, ಅತಿ ಸ್ವಲ್ಪ ಪ್ರಮಾಣದಲ್ಲಿ ಚುಚ್ಚುಮದ್ದಿನ ಮೂಲಕ ಶರೀರ ತಲುಪಿದಾಗ, ಆ ರೋಗ ಬಾರದೆಯೇ ಆ ರೋಗದ ರೋಗಾಣುಗಳೊಂದಿಗೆ ಹೋರಾಡುವ ಶಕ್ತಿ ಆ್ಯಂಟಿಬಾಡೀಸ್ ಗೆ ಬರುತ್ತದೆ. ಹಾಗಾಗಿ ಮುಂದೆ ಆ ರೋಗಗಳು ದೇಹ ಪ್ರವೇಶಿಸಿದರು ಏನು ಮಾಡಲಾರವು.
● ವ್ಯಕ್ತಿಯ ದೇಹ ರೋಗನಿರೋಧಕ ಶಕ್ತಿಯಿಂದ ಕೂಡಿ, ರೋಗಾಣು ಸೋಂಕಿದರೂ ರೋಗ ರಹಿತನಾಗುತ್ತಾನೆ.
● ಎಲ್ಲಾ ತರಹದ ಸೋಂಕಿಗೂ ನಮ್ಮಲ್ಲಿ ಲಸಿಕೆಗಳು ಇಲ್ಲದಿದ್ದರೂ, ಈಗಿರುವ ಲಸಿಕೆಗಳಿಂದ ಎಷ್ಟೋ ಭಯಂಕರ ರೋಗಗಳಿಂದ ನಾವು ರಕ್ಷಿಸಿಕೊಳ್ಳಬಹುದು.
ಚಿಕಿತ್ಸೆ
● ಅಂಟುರೋಗಗಳಿಗೆ ಆಯಾ ರೋಗವನ್ನುಂಟು ಮಾಡುವ ಜೀವಾಣುಗಳ ಪ್ರಕಾರ ವೈದ್ಯಕೀಯ ಚಿಕಿತ್ಸೆ ಲಭ್ಯ. ಉದಾಹರಣೆಗೆ .
● ಡಿಫ್ತೀರಿಯ (ಗಂಟಲು ರೋಗ) ಗೊನ್ಹೋರಿಯ (Gonorrhoea) ನ್ಯೂಮೋನಿಯ, ಸಿಫಿಲಿಸ್, ಕ್ಷಯ, ಟೈಫಾಯ್ಡ್ ಮೊದಲಾದ ಬ್ಯಾಕ್ಟೀರಿಯ ಮೂಲಕ ಹರಡುವ ಕಾಯಿಲೆಗಳಿಗೆ (Pencilin) ಪೆನ್ಸಿಲಿನ್ ಅಂತಹ ಆ್ಯಂಟಿಬಯೋಟಿಕ್ಸ್ ಉಪಯೋಗಿಸುತ್ತೇವೆ.
ಅಂಟುರೋಗಗಳು ಯಾರಿಗೆ ಸೋಂಕುತ್ತವೆ?
● ಅಂಟು ರೋಗಗಳು ವ್ಯಾಪಿಸಿರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಮತ್ತು ಅಲ್ಲಿ ಪ್ರಯಾಣಿಸುವವರಿಗೆ.
● ಮೂರು ವರ್ಷದೊಳಗಿನ ಮಕ್ಕಳಿಗೆ ● ಅಂಟುರೋಗವುಳ್ಳ ವ್ಯಕ್ತಿಯ ಕುಟುಂಬದ ಸದಸ್ಯರಿಗೆ
● ಸೀತಾಳ ಸಿಡುಬು(Chicken pox) ನಂತಹ ಬಾಲ್ಯ ರೋಗವು ದೊಡ್ಡವರಿಗೆ ಬಂದಾಗ ಅದರ ಪರಿಣಾಮ ಬಹಳ ತೀವ್ರವಾಗಿ ಇರುತ್ತದೆ.
● ವೃದ್ದರು, ದುರ್ಬಲರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವಂತಹ ಜನರಿಗೆ.
●Protozoa ಕ್ರಿಮಿಗಳಿಂದ ಉಂಟಾಗುವ ಮಲೇರಿಯಾ, ಶಿಲೀಂಧ್ರ (Fungi) ಗಳಿಂದ ಉಂಟಾಗುವ ಮೈಸಿಲೋಮಾ ಫಂಗಸ್, ಕ್ಯಾಂಡಿಡಾ ಫಂಗಸ್ ಇವುಗಳಿಗೆ ಬೇರೆ ಔಷಧಿ ನೀಡಲಾಗುತ್ತದೆ.
ಸಾಂಕ್ರಮಿಕ ರೋಗಗಳ ನಿವಾರಣೋಪಾಯಗಳು:
● ವೈದ್ಯರು ಸೂಚಿಸುವ ಲಸಿಕೆಗಳನ್ನು ಮಕ್ಕಳಿಗೆ ಹಾಕಿಸುವುದು.
● ಹೊರದೇಶಗಳಿಗೆ ಹೋಗುವಾಗ ಅಲ್ಲಿ ವ್ಯಾಪಿಸಿರುವ ಸೋಂಕು ರೋಗಗಳ ಬಗ್ಗೆ ವೈದ್ಯರಿಂದ ತಿಳಿದುಕೊಂಡು, ತಕ್ಕ ಲಸಿಕೆ ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವುದು.
● ಸಾಂಕ್ರಾಮಿಕ ರೋಗ ಹರಡುವ ಪ್ರದೇಶಗಳಲ್ಲಿ ಪ್ರಯಾಣಿಸುವಂತಿದ್ದರೆ ಅಲ್ಲಿ ಐಸ್ ಕ್ರೀಮ್, ಅಶುದ್ಧ ನೀರು, ತಣ್ಣನೆಯ ಮತ್ತು ಕೂಯ್ದು ಮಾರಾಟ ಮಾಡುವ ಹಣ್ಣು ಮತ್ತು ತರಕಾರಿಗಳ ಉಪಯೋಗಿಸಬಾರದು.
● ಸೋಂಕಿನ ಬಗ್ಗೆ ಅತಿ ಜಾಗ್ರತೆ ವಹಿಸುವುದು ಸೂಕ್ತ.
ಕೆಲವು ಅಂಟುರೋಗಗಳು
● ಏಡ್ಸ್
● ಹೆಪಟೈಟಿಸ್ ಎ ಬಿ ಮುಂತಾದವು
● ಶೀತ
● ಪ್ಲೂ
● ದಡಾರ
● ರೆಬಿಸ್
● ರುಬೆಲ್ಲಾ
● ಸಿಫಿಲಿಸ್, ಗನೋರಿಯದಂತಹ ಲೈಂಗಿಕ ರೋಗಗಳು
● ಮೆದುಳು ಜ್ವರ
● ಅತಿಸಾರ
● ಜ್ವರ
● ತಲೆನೋವು ಮೊದಲಾದವು
● ನ್ಯೂಮೋನಿಯಾ
● ಕ್ಷಯ
● ಟೈಫಾಯ್ಡ್
● ಅಮಿಬಿಯಾಸಿಸ್
● ಕಾಲರ
●ಮಲೇರಿಯಾ ಮೊದಲಾದವು…
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.