ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಟೀಚರ್ :ಕೀಟಗಳ ಕಚ್ಚುವಿಕೆಇಂದ ರೋಗ ಹರಡುವುದು ತಡೆಯಲು ಸಾಧ್ಯವೇ ?

ಬಾಲು: ಸಾಧ್ಯ ಸರ್.

ಟೀಚರ್ : ಹೇಗೆ ವಿವರಿಸು…

ಬಾಲು : ನಾವು ಯಾರನ್ನು ಕಚ್ಚದಿದ್ರೆ ಆಯ್ತು ಸರ್…

*****

ಆರನೇ ತರಗತಿಯಲ್ಲಿ ಓದುತ್ತಿದ್ದ ಹರ್ಷ ಪರೀಕ್ಷೆಗೆ ಹೋಗುವ ಮೊದಲು ಗಣೇಶನ ಗುಡಿ ಅರ್ಚಕರ ಕೈಗೆ ಐದು ರೂಪಾಯಿ ಕೊಟ್ಟು ಹೇಳಿದ “ಅಂಕಲ್ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿ ಈಗಲೇ ಬೇಡ ಮಧ್ಯಾಹ್ನ 2 ಗಂಟೆಗೆ ಇವತ್ತು ಗಣಿತ ಪರೀಕ್ಷೆ ಇದೆ ಬಹಳ ಕಷ್ಟ ಅದಕ್ಕೆ”

******

ಆತ : ನಾನು ಈ ಊರಿಂದ ಟ್ರಾನ್ಸ್ಫರ್ ತಗೊಳ್ಳೋಣ ಅಂತಿದೀನಿ

ಈತ : ಯಾಕೆ ಈ ಊರಲ್ಲಿ ಏನು ತಾಪತ್ರಯ.

ಈತ : ಊರಲ್ಲಿ ಏನಿಲ್ಲ ಆಫೀಸ್ ನಲ್ಲಿ ನನಗೆ ಆಫೀಸ್ ಕೆಲಸಕ್ಕಿಂತ ಬಾಸ್ ಮನೆ ಕೆಲಸ ಮಾಡೋದ್ರಲ್ಲಿ ಸಾಕಾಗಿದೆ