ಮನೆ ಅಪರಾಧ ಪ್ರವಾದಿ ಮೊಹಮ್ಮದ್ ನಿಂದಿಸುವವರ ಶಿರಚ್ಛೇದ ಮಾಡಿ ಎಂದು ಪ್ರಚೋದನಕಾರಿ ರೀಲ್ಸ್: ಇಬ್ಬರ ಬಂಧನ

ಪ್ರವಾದಿ ಮೊಹಮ್ಮದ್ ನಿಂದಿಸುವವರ ಶಿರಚ್ಛೇದ ಮಾಡಿ ಎಂದು ಪ್ರಚೋದನಕಾರಿ ರೀಲ್ಸ್: ಇಬ್ಬರ ಬಂಧನ

0

ಯಾದಗಿರಿ: ಮಹಮ್ಮದ್‌ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರನ್ನು, ಅವಮಾನ ಮಾಡಿದವರ ಶಿರಚ್ಛೇದ ಮಾಡಿ ಎಂಬ ಪ್ರಚೋದನಕಾರಿ ಸಂದೇಶದ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಯಾದಗಿರಿ ಗ್ರಾಮಾಂತರ ಠಾಣೆಯ ‍ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಆಶನಾಳ ಗ್ರಾಮದ ಅಕ್ಬರ್ ಸೈಯದ್ ಬಹದ್ದೂರ್ ಅಲಿ (23), ಹತ್ತಿಕುಣಿ ಕ್ರಾಸ್‌ ನಿವಾಸಿ ಮೊಹಮ್ಮದ್ ಅಯಾಜ್ (21) ನನ್ನು ಬಂಧಿಸಲಾಗಿದೆ.

ಮೂರು ದಿನಗಳ ಹಿಂದೆ ಸೈಯದ್ ಅಲಿ ಅಕ್ಬರ್ ಜಾಗೀರದಾರ್ ಎಂಬ ವ್ಯಕ್ತಿ ತನ್ನ ಇನ್‌ ಸ್ಟಾಗ್ರಾಮ್‌ ನಲ್ಲಿ ಪ್ರಚೋದನಕಾರಿ ವಿಡಿಯೋಗಳನ್ನು ಅಪ್‌ ಲೋಡ್ ಮಾಡಿದ್ದ.

ಇನ್‌ ಸ್ಟಾಗ್ರಾಮ್ ರೀಲ್‌ ನಲ್ಲಿ, ಸೈಯದ್ “ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸುವವರ ಶಿರಚ್ಛೇದ ಮಾಡಿ” ಎಂದು ಹೇಳಿದ್ದ. ಮತ್ತೊಂದು ವಿಡಿಯೋದಲ್ಲಿ, “ಕುರಾನ್ ಪ್ರಕಾರ ಕಾಫಿರರಿಗೆ(ಅನ್ಯ ಧರ್ಮಿಯರು) ಇರುವ ಏಕೈಕ ಸ್ಥಳವೆಂದರೆ ನರಕ” ಎಂದು ಹೇಳಿದ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಚೋದನಕಾರಿ ವಿಡಿಯೋ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು.

ಸದ್ಯ ಯಾದಗಿರಿ ಜಿಲ್ಲಾ ಪೊಲೀಸರು ಮಂಗಳವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅದೇ ರಾತ್ರಿ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 153 ಅಡಿ ಕೇಸ್ ದಾಖಲಾಗಿದೆ.