ಹೊಸದಿಲ್ಲಿ: ಟ್ಯೂಷನ್ ಟೀಚರ್ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 14 ವರ್ಷ ಪ್ರಾಯದ ಬಾಲಕನನ್ನು ಬಂಧಿಸಿದ್ದಾರೆ. 28ರ ಹರೆಯದ ಟ್ಯೂಟರ್ ಬಾಲಕನಿಗೆ ನಿತ್ಯ ನಿಂದನೇ ಮಾಡುತ್ತಿದ್ದು, ಹಲ್ಲೆಯ ವಿಡಿಯೋ ಕೂಡ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತೀಕಾರವಾಗಿ ಆತನನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ ಮೂರು ದಿನಗಳ ನಂತರ ಹುಡುಗನನ್ನು ಶುಕ್ರವಾರ ಬಂಧಿಸಲಾಯಿತು.
ಆಗಸ್ಟ್ 30 ರಂದು ಮಧ್ಯಾಹ್ನ 2-15ರ ಸುಮಾರಿಗೆ ಜಾಮಿಯಾ ನಗರದ ಬಟ್ಲಾ ಹೌಸ್ ನಲ್ಲಿರುವ ಮನೆಯ ಎರಡನೇ ಮಹಡಿಯಲ್ಲಿನ ಕೋಣೆಯಿಂದ ರಕ್ತ ಬರುತ್ತಿದೆ ಎಂದು ಪಿಸಿಆರ್ ಕರೆ ಬಂದಿತ್ತು. ಕೊಟ್ಟಡಿ ತೆರೆದಿತ್ತು ಎಂದು ಆಗ್ನೇಯ ದೆಹಲಿ ಡಿಸಿಪಿ ರಾಜೇಶ್ ಡಿಯೋ ಹೇಳಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ತಂಡಕ್ಕೆ ವ್ಯಕ್ತಿಯ ಕುತ್ತಿಗೆಯ ಮೇಲೆ ಆಳವಾದ ಗಾಯಗಳೊಂದಿಗೆ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಬೋಧಕನು ತನ್ನ ಕುಟುಂಬದೊಂದಿಗೆ ಜಾಕಿರ್ ನಗರದಲ್ಲಿ ವಾಸು ಸೇತುದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತಕ್ಷಣಕ್ಕೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಭೋದಕನು ಸಲಿಂಗಕಾಮಿ ಎಂದು ಹೇಳಲಾಗುತ್ತದೆ. ಮತ್ತು ಎರಡು ತಿಂಗಳ ಹಿಂದೆ ಹುಡುಗನನ್ನು ಭೇಟಿಯಾಗಿದ್ದನು ಮತ್ತು ನಂತರ ಹಲವಾರು ಸಂದರ್ಭಗಳಲ್ಲಿ ಅವನನ್ನು ಲೈಂಗಿಕವಾಗಿ ಹಿಂಸಿಸಿದ್ದಾನೆ ಎಂದು ಪೊಲೀಸರು ತನಿಖೆಯಿಂದ ಕಂಡುಕೊಂಡಿದ್ದಾರೆ.
ಘಟನೆಯ ದಿನ ಟೀಚರ್ ತನ್ನ ಜಾಮಿಯಾ ನಗರದ ಮನೆಗೆ ಭೇಟಿಯಾಗಲು ಬಾಲಕನಿಗೆ ಕರೆ ಮಾಡಿದ್ದ ಹೇಳಿದ್ದ. ಚೂಪಾದ ಪೇಪರ್ ಕಟರ್ನೊಂದಿಗೆ ಅಪಾರ್ಟ್ಮೆಂಟ್ ಗೆ ಹೋಗಿ ಸ್ಥಳದಿಂದ ಪರಾರಿ ಯಾಗುವ ಮೊದಲು ವ್ಯಕ್ತಿಯ ಕತ್ತು ಸೀಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.