ಮನೆ ರಾಜ್ಯ 58 ಮಂದಿ ಸಬ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

58 ಮಂದಿ ಸಬ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

0

ಮೈಸೂರು : ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪ್ರಸ್ತುತ ಎ.ಎಸ್.ಐ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 58 ಸಬ್ ಇನ್ಸ್ಪೆಕ್ಟರ್ ಗಳಿಗೆ ಪ್ರಭಾರ ನೀಡಿ ಸ್ಥಳ ನಿಯೋಜನೆ ಮಾಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ಠಾಣೆಗೆ ಎ.ಆರ್. ಸುರೇಶ್, ಸಾಲಿಗ್ರಾಮ ಠಾಣೆಗೆ ಎಚ್. ಏನ್. ಕೋಟೆಗೌಡ, ತಲಕಾಡಿಗೆ ಕೇಶವಕುಮಾರ್, ನಂಜನಗೂಡು ಪಟ್ಟಣಗೆ ಬಿ. ವೈ. ಶಿವಣ್ಣ, ಹೆಚ್. ಡಿ. ಕೋಟೆಗೆ ಜಿ.ವಿ. ಗೌರಿ ಶಂಕರ, ಅಂತರಸಂತೆಗೆ ಆರ್. ಕುಮಾರ್, ಮೈಸೂರು ದಕ್ಷಿಣ ಠಾಣೆಗೆ ಶಾಂತಲಿಂಗಯ್ಯ, ನಂಜನಗೂಡು ಗ್ರಾಮಾಂತರ ಠಾಣೆಗೆ ಗೋಪಾಲಕೃಷ್ಣ, ಹುಣಸೂರು ಗ್ರಾಮಾಂತರ ಠಾಣೆಗೆ ಆರ್. ಪಾಂಡುರಂಗ, ಕೆ. ಆರ್. ನಗರಕ್ಕೆ ಎಂ ನಂಜಪ್ಪ, ಹೆಚ್. ಡಿ. ಕೋಟೆಗೆ ಸುಬ್ರಮಣ್ಯ, ಪಿರಿಯಾಪಟ್ಟಣಕ್ಕೆ ನಾಗರಾಜು, ಟಿ.ನರಸೀಪುರ ಠಾಣೆಗೆ ಬಿ ಪ್ರಭಾಕರವನ್ನು ನಿಯೋಜಿಸಲಾಗಿದೆ.

ಚಾಮರಾಜನಗರ ಜಿಲ್ಲೆ, ರಾಮಪುರ ಠಾಣೆಗೆ ಲೋಕೇಶ್, ಅಗರ- ಮಾಂಬಳ್ಳಿಗೆ ಎಂ. ಸಿದ್ದರಾಜು, ಏಳಂದೂರಿಗೆ ಎಂ. ಮಲ್ಲಿಕಾರ್ಜುನ, ಚಾಮರಾಜನಗರ ಪೂರ್ವ ಠಾಣೆಗೆ ವಿಜಯ್ ಕುಮಾರ್, ಗುಂಡ್ಲುಪೇಟೆಗೆ ಎಂ.ಎನ್. ಶಿವಶಂಕರಪ್ಪ, ಚಾಮರಾಜನಗರ ಶಿವಶಂಕರ, ಸಂತೆಮಾರನಹಳ್ಳಿ ಚಂದ್ರಶೇಖರ, ಹನೂರು ಠಾಣೆಗೆ ಅಶ್ವತ, ಚಾಮರಾಜನಗರ ಟೌನ್ ಠಾಣೆಗೆ ಕೆ.ಎಂ. ಗೋಪಾಲಕೃಷ್ಣ, ಗುಂಡ್ಲುಪೇಟೆಗೆ ಸಿ.ಎಂ. ಜಯರಾಮ್, ಚಾಮರಾಜನಗರ ಜಿಲ್ಲೆ ಸೆಂಡ್ ಠಾಣೆಗೆ ಎಸ್.ಪ್ರಕಾಶ್, ಚಾಮರಾಜನಗರ ಪಟ್ಟಣ ಠಾಣೆಗೆ ಸ್ವಾಮಿ, ಮಹದೇಶ್ವರ ಬೆಟ್ಟಕ್ಕೆ ಎಂ. ರವಿ, ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ಏನ್. ಚೆಲುವರಾಜು, ತೆರಕಣಾಂಬಿಗೆ ಕೂಸಪ್ಪ, ಡಿ.ಎಸ್.ಬಿ.ಗೆ ಚಂದ್ರಪ್ಪ, ಸೆನ್ ಠಾಣೆಗೆ ಡಿ.ಧನಂಜಯ, ಚಾಮರಾಜನಗರ ಪೂರ್ವ ಠಾಣೆಗೆ ವಸಂತ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.

ಮಂಡ್ಯ ಜಿಲ್ಲೆ ಅರಕೆರೆಗೆ ಶಿವರುದ್ರ, ಕೆ. ಎಂ. ದೊಡ್ಡಿಗೆ ಕೆ.ಸಿ. ದೇವರಾಜು, ಕೆ.ಬೆಳ್ಳೂರು ಠಾಣೆಗೆ ಶ್ರೀಧರ್ ಸ್ವಾಮಿ, ಮಂಡ್ಯ ಪಶ್ಚಿಮಠಾಣೆಗೆ ಪಿ. ಅರ್ಕೇಶ್, ಕಿರುಗಾವಲು ಠಾಣೆಗೆ ಎಂ.ಸಿದ್ದರಾಜು, ಮಂಡ್ಯಗ್ರಾಮಾಂತರ ಠಾಣೆಗೆ ಚಿಕ್ಕಹುಚ್ಚೇಗೌಡ, ಶ್ರೀರಂಗಪಟ್ಟಣ ಗ್ರಾಮಾಂತರಕ್ಕೆ ಹೇಮಂತ್ ಕುಮಾರ್, ಮಂಡ್ಯಸೆಂಟ್ರಲ್ ಗೆ ಎಸ್. ಬಿ. ಮೋಹನ್ ಕುಮಾರ್, ಕೊಪ್ಪಠಾಣೆಗೆ ಎಂ. ಮಹದೇವು, ಪಾಂಡವಪುರಕ್ಕೆ ಮಹಾದೇವ, ಶಿವಳ್ಳಿಗೆ ಎಂ. ಕೆ. ರಘು ಪ್ರಸಾದ್, ಕೆಸ್ತೂರು ಠಾಣೆಗೆ ಎಂ. ಬಿ. ಮಂಜುನಾಥ್, ಶ್ರೀರಂಗಪಟ್ಟಣಕ್ಕೆ ಎಂ.ಎಸ್. ಗುರುಸ್ವಾಮಿ, ಕೆರಗೂಡು ಠಾಣೆಗೆ ಎಸ್.ಎ. ಮುನಿ ವೀರೇಗೌಡ, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ವೆಂಕಟೇಶ ಆಚಾರ್ ಮತ್ತು ಮಂಚಪ್ಪ ಕೆ. ಆರ್. ಸಾಗರಕ್ಕೆ ಕೆ. ರಾಮಣ್ಣ, ಅವರನ್ನು ಸಬ್ ಇನ್ಸ್ಪೆಕ್ಟರ್ ಪ್ರಭಾರ ನೀಡಿ ನಿಯೋಜಿಸಲಾಗಿದೆ.