ಮನೆ ರಾಜ್ಯ ಸ್ಕೂಟರ್-ರಿಕ್ಷಾ ಢಿಕ್ಕಿ: ಪ್ರಯಾಣಿಕ ಸಾವು

ಸ್ಕೂಟರ್-ರಿಕ್ಷಾ ಢಿಕ್ಕಿ: ಪ್ರಯಾಣಿಕ ಸಾವು

0

ವಿಟ್ಲ: ಪೆರುವಾಯಿ ಬೆರಿಪದವು ರಸ್ತೆಯಲ್ಲಿ ಸ್ಕೂಟರ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ್ದು, ರಿಕ್ಷಾ ಪ್ರಯಾಣಿಕನೋರ್ವ ಸಾವನ್ನಪ್ಪಿದ್ದಾರೆ.

ಬಾಯಾರು ಪೆರುವೋಡಿ ನಿವಾಸಿ ಸುರೇಶ್ ಭಟ್ ಪುತ್ರ ನಾಗೇಶ್ ಭಟ್ (47) ನಿಧನರಾಗಿದ್ದಾರೆ.  ವಿನೋದ್ ಹಾಗೂ ಅಣ್ಣು ಎಂಬವರು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.

ವಾಹನವನ್ನು ಹಿಂದಿಕ್ಕುವ ಸಂದರ್ಭದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಢಿಕ್ಕಿಯಾಗಿದ್ದು, ರಿಕ್ಷಾ ರಸ್ತೆಗೆ ಉರುಳಿದೆ. ಈ ಸಂದರ್ಭ ರಿಕ್ಷಾದಲ್ಲಿದ್ದ ಪ್ರಯಾಣಿಕರೊಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ನಾಗೇಶ್ ಭಟ್ ಮೃತ ಪಟ್ಟಿದ್ದಾರೆಂದು ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ದೃಢೀಕರಿಸಿದ್ದಾರೆ.