ಮನೆ ಅಪರಾಧ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ ಲಾಕರ್ ನಲ್ಲಿದ್ದ ಹಣ  ಕಳ್ಳತನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ ಲಾಕರ್ ನಲ್ಲಿದ್ದ ಹಣ  ಕಳ್ಳತನ

0

ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯ ಲಾಕರ್’ನಲ್ಲಿದ್ದ ಹಣ ಕಳ್ಳತನವಾದ ಘಟನೆ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಇರುವ ರಾಯಾಪುರ‌ ಬಡಾವಣೆ ಕಚೇರಿಯಲ್ಲಿ ನಡೆದಿದೆ.

ವಿಜಯದಶಮಿ ಇರುವ ಹಿನ್ನಲೆ ಬ್ಯಾಂಕ್ ರಜೆ ಇದ್ದು, ಇದನ್ನೇ ಅವಕಾಶ ಮಾಡಿಕೊಂಡಿರುವ ಖದೀಮರು, ಕಚೇರಿ ಶೌಚಾಲಯದ ಕಿಟಕಿ ಒಡೆದು, ಲಾಕರ್‌ ನಲ್ಲಿಟ್ಟಿದ್ದ ಬರೊಬ್ಬರಿ 1.24 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.