ದಿವ್ಯಾ ಉರುಡುಗ ಮತ್ತು ಅರವಿಂದ್ಜೋಡಿಯ ಹೊಸ ಸಿನಿಮಾ “ಅರ್ಧಂಬರ್ಧ ಪ್ರೇಮಕಥೆ’ ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೇ ವರ್ಷಾಂತ್ಯದೊಳಗೆ ತೆರೆಗೆ ಬರುವ ಯೋಚನೆಯಲ್ಲಿದೆ.
ಕನ್ನಡದಲ್ಲಿ “ನಮ್ ಏರಿಯಾಲ್ ಒಂದಿನ’, “ತುಘಲಕ್’ “ಹುಲಿರಾಯ’ ಮೊದಲಾದ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಅರವಿಂದ್ ಕೌಶಿಕ್ “ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ತಮ್ಮ “ಅರ್ಧಂಬರ್ಧ ಪ್ರೇಮಕಥೆ’ಯ ಬಗ್ಗೆ ಮಾತನಾಡುವ ನಿರ್ದೇಶಕ ಅರವಿಂದ್ ಕೌಶಿಕ್, “ಇಲ್ಲಿಯವರೆಗೆ ನಮ್ಮಲ್ಲಿ ಎಲ್ಲಾಥರದ ಪ್ರೇಮಕಥೆಗಳು ಸಾಕಷ್ಟು ಬಂದಿವೆ. ಯಾವುದೇ ಪ್ರೇಮಕಥೆ ಎಂಡಿಂಗ್ ಕೊಟ್ಟರೆ ಅದು ಅಲ್ಲಿಗೆ ಮುಗಿಯುತ್ತದೆ. ಆದರೆ ನಿಜವಾದ ಪ್ರೇಮಕ್ಕೆ ಕೊನೆಯಿಲ್ಲ. ಕಾಲಕ್ಕೆ ತಕ್ಕಂತೆ ಪ್ರೇಮದ ಆಯಾಮ ಬದಲಾಗುತ್ತಿದೆ. ಸದ್ಯ ಪ್ರೇಮ ಅನ್ನೋದು ರಾತ್ರೋರಾತ್ರಿ ಬದಲಾಗುವ ಕಾಲದಲ್ಲಿ ನಾವಿದ್ದೇವೆ. ಪ್ರೀತಿ ಒಂದು ಭಾವನೆಯಾಗಿದ್ದಾಗ ಬೆಳೆಯುವುದು ಸುಲಭ. ಅದೇ ಪ್ರೀತಿ ಸಂಬಂಧವಾದಾಗ ಚೌಕಟ್ಟಿನಲ್ಲಿ ಬೆಳೆಯುವುದು ಕಷ್ಟ. ಇಂಥ ಚೌಕಟ್ಟಿನಲ್ಲಿ ಪ್ರೀತಿಯನ್ನು ಪ್ರೀತಿಯನ್ನು ಹೇಗೆ ಕಾಪಾಡಬಹುದು ಎಂಬುದೇ ಈ ಸಿನಿಮಾ’ ಎಂದು ವಿವರಣೆ ಕೊಡುತ್ತಾರೆ.
“ಅರ್ಧಂಬಂರ್ಧ ಪ್ರೇಮ ಕ ಥೆ’ ಸಿನಿಮಾದ ಮೂಲಕ ಬೈಕ್ ರೇಸರ್ ಅರ ವಿಂದ್ ನಾಯ ಕ ರಾಗಿ ಲಾಂಚ್ ಆಗುತ್ತಿದ್ದಾರೆ. “ಮೊದಲ ಸಿನಿಮಾದಲ್ಲೇ ಅರವಿಂದ್ ಭರವಸೆ ಮೂಡಿಸುತ್ತಾರೆ’ ಎಂಬುದು ನಿರ್ದೇಶಕ ಅರವಿಂದ್ ಕೌಶಿಕ್ ಮಾತು.
“ಬಕ್ಸಸ್ ಮೀಡಿಯಾ’, “ಲೈಟ್ ಹೌಸ್ ಮೀಡಿಯಾ’ ಮತ್ತು “ಆರ್ಎಸಿ ವಿಷುವಲ್ಸ್’ ಬ್ಯಾನರ್ನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ “ಅರ್ಧಂಬಂರ್ಧ ಪ್ರೇಮಕಥೆ’ ಸಿನಿಮಾದಲ್ಲಿ ದಿವ್ಯಾ, ಅರವಿಂದ್ ಜೊತೆಗೆ ರ್ಯಾಪರ್ ಅಲೋಕ್, ಅಭಿಲಾಶ್ ದ್ವಾರಕೀಶ್, ಶ್ರೇಯಾ ಬಾಬು, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಶನ್, ಸುಜಿತ್ ಶೆಟ್ಟಿ, ಸೂರಜ್ ಹೂಗಾರ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಅರ್ಧಂಬಂರ್ಧ ಪ್ರೇಮಕಥೆ’ ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ, ಸೂರ್ಯ ಛಾಯಾಗ್ರಹಣವಿದೆ. ಈಗಾಗಲೇ ಬಿಡುಗಡೆಯಾಗಿರುವ “ಅರ್ಧಂಬಂರ್ಧ ಪ್ರೇಮ ಕ ಥೆ’ ಸಿನಿಮಾದ ಟೀಸರ್ ಮತ್ತು ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಸಿನಿಮಾದ ಸೆನ್ಸಾರ್ ಆಗಿರುವ “ಅರ್ಧಂಬಂರ್ಧ ಪ್ರೇಮ ಕಥೆ’ ಸಿನಿಮಾದ ಪ್ರಚಾರ ಕಾರ್ಯಗಳಿ ಭರದಿಂದ ನಡೆಯುತ್ತಿದ್ದು, ಇದೇ ಡಿಸೆಂಬರ್ ಅಂತ್ಯದೊಳಗೆ ಸಿನಿಮಾ ತೆರೆಗೆ ಬರಲಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.