ಮನೆ ಅಪರಾಧ ಮೈಸೂರು: ಹೋಟೆಲ್ ಮಾಲೀಕರಿಗೆ ಸೇರಿದ 9 ಲಕ್ಷ ರೂ.ಕಳವು

ಮೈಸೂರು: ಹೋಟೆಲ್ ಮಾಲೀಕರಿಗೆ ಸೇರಿದ 9 ಲಕ್ಷ ರೂ.ಕಳವು

0

ಮೈಸೂರು: ಹೋಟೆಲ್ ಮಾಲೀಕರಿಗೆ ಸೇರಿದ 9 ಲಕ್ಷ ರೂ.ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕಾರು ಚಾಲಕನ ಕೈಯಲ್ಲಿದ್ದ ಹಣದ ಬ್ಯಾಗನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ಘಟನೆ ಅಗ್ರಹಾರದ ಬಳಿ ನಡೆದಿದೆ.

ಹೋಟೆಲ್ ಮಾಲೀಕ ರಾಕೇಶ್ ಕುಮಾರ್ ಅವರು ಸರಸ್ವತಿಪುರಂನಲ್ಲಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ 9 ಲಕ್ಷ ರೂ. ಡ್ರಾ ಮಾಡಿಕೊಂಡು ಬರುವಂತೆ ತಮ್ಮ ಕಾರು ಚಾಲಕ ವಿಶ್ವನಾಥ್ ಸಿಂಗ್ ಎಂಬವರಿಗೆ ತಿಳಿಸಿ ಚೆಕ್ ನೀಡಿದ್ದಾರೆ. ಆತ ಬ್ಯಾಂಕ್ ಗೆ ತೆರಳಿ ಹಣವನ್ನು ಡ್ರಾಮಾಡಿಕೊಂಡು ಬಂದಿದ್ದಾರೆ. ನಂತರ ಅಗ್ರಹಾರದಲ್ಲಿರುವ ಭಾಷ್ಯಂ ಸ್ವಾಮೀಜಿ ಮನೆಗೆ ತೆರಳಿ ಪ್ರಸಾದ ತೆಗೆದುಕೊಂಡು ಬರುವಂತೆ ಮಾಲೀಕರು ತಿಳಿಸಿದ್ದ ಕಾರಣ, ಕಾರನ್ನು ರಸ್ತೆ ಬದಿ ನಿಲ್ಲಿಸಿ ವಿಶ್ವನಾಥ್ ಅವರು ಸ್ವಾಮೀಜಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ವಿಶ್ವನಾಥ್ ಸಿಂಗ್ ಹಿಡಿದಿದ್ದ ಹಣದ ಬ್ಯಾಗನ್ನು ಕಸಿದು ಪರಾರಿಯಾಗಿದ್ದಾರೆ.

ಈ ಸಂಬಂಧ ಕೆ.ಆರ್ ಠಾಣೆಯಲ್ಲಿ ದೂರು ದಾಖಲಾಗಿದೆ.