ಮನೆ ರಾಜ್ಯ ಮೈಸೂರು: ಮಳೆ ನೀರು ಚರಂಡಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಕೆ ಹರೀಶ್ ಗೌಡ

ಮೈಸೂರು: ಮಳೆ ನೀರು ಚರಂಡಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಕೆ ಹರೀಶ್ ಗೌಡ

0

ಮೈಸೂರು: ಚಾಮರಾಜ ವಿಧಾನಸಭೆ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡರವರು ಇಂದು ಬೆಳಿಗ್ಗೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ಸಂ. 20 ರ ವ್ಯಾಪ್ತಿಯಲ್ಲಿ ವಿಜಯನಗರ 2ನೇ ಹಂತ ಕದಂಬ ಬೇಕರಿ ರಸ್ತೆ ಹಾಗೂ ಸ್ನೇಕ್ ಶ್ಯಾಮ್ ರಸ್ತೆಯ ಮಳೆ ನೀರು ಚರಂಡಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು. 

ಮೈಸೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ಮಹೇಶ್‌, ವಲಯ ಕಚೇರಿ-5 ರ ಅಭಿವೃದ್ಧಿ ಅಧಿಕಾರಿಯಾದ ಮನುಗೌಡ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಸ್ಥಳ ಪರಿಶೀಲನೆ ವೇಳೆ ಸಾರ್ವಜನಿಕರ ಸಮಸ್ಯೆಗಳು ಹಾಗೂ ಅಭಿಪ್ರಾಯವನ್ನು ಸಹ ಕೇಳಿದರು. 

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಶ್ರೀ ಸುಬ್ಬಯ್ಯ, ಸ್ಥಳೀಯ ಮುಖಂಡರಾದ ಗೋಪಾಲ್ ಸ್ವಾಮಿ, ರವಿ, ಸಂವಿತ, ನಾಗರಾಜ್ ಯೋಗೇಶ,ಕಂಟ್ರಾಕ್ಟರ್ ಸ್ವಾಮಿ ಗೌಡ, ಸ್ಥಳೀಯ ವಿಜಯನಗರ ನಿವಾಸಿಗಳು ಸಹ ಉಪಸ್ಥಿತರಿದ್ದರು.