ಮನೆ ಅಪರಾಧ ಮೈಸೂರು: ಲಂಚ ಸ್ವೀಕರಿಸುತ್ತಿದ್ದ ಮಹಿಳಾ ಎಎಸ್​ ಐ ಲೋಕಾಯುಕ್ತ ಬಲೆಗೆ

ಮೈಸೂರು: ಲಂಚ ಸ್ವೀಕರಿಸುತ್ತಿದ್ದ ಮಹಿಳಾ ಎಎಸ್​ ಐ ಲೋಕಾಯುಕ್ತ ಬಲೆಗೆ

0

ಮೈಸೂರು: ಲಂಚ ಸ್ವೀಕರಿಸುತ್ತಿದ್ದಾಗ ಮಹಿಳಾ ಎಎಸ್ ​ಐ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಕೀಲಾವತಿ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಹೆಚ್​.ಡಿ.ಕೋಟೆ ಪೊಲೀಸ್ ಠಾಣೆ ಎಎಸ್​ಐ.

ಕೆಂಡಗಣ್ಣ ನಾಯ್ಕ ಎಂಬುವರು ನಾಗೇಂದ್ರಗೆ 1.25 ಲಕ್ಷ ಸಾಲ ನೀಡಿದ್ದರು. ಈ ಮೊತ್ತದಲ್ಲಿ ನಾಗೇಂದ್ರ ಅವರು 25 ಸಾವಿರ ರೂಪಾಯಿ ವಾಪಸ್​​ ನೀಡಿದ್ದು, 1 ಲಕ್ಷ ರೂ. ಬಾಕಿ ಇರಿಸಿಕೊಂಡು ಕೆಂಡಗಣ್ಣ ಅವರಿಗೆ ಸತಾಯಿಸುತ್ತಿದ್ದನು. ಈ ಬಗ್ಗೆ ಕೆಂಡಗಣ್ಣ ಅವರು ಹೆಚ್​ ಡಿ ಕೋಟೆ ಠಾಣೆಗೆ ದೂರು ನೀಡಿದ್ದರು.

ಆದರೆ, ಸಾಲದ ಹಣ ವಾಪಸ್​​ ಕೊಡಿಸುವುದಕ್ಕೆ ಎಎಸ್​ ಐ ಶಕೀಲಾವತಿ ಅವರು ಮೂರು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕೆಂಡಗಣ್ಣ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ನಡೆದ ಟ್ರಾಪ್​ ನಲ್ಲಿ ಕೆಂಡಗಣ್ಣ ಅವರಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.