ಮನೆ ಅಪರಾಧ ಮೈಸೂರು: ಚಿರತೆ ಅಂಗಾಂಗ ಮಾರಾಟಕ್ಕೆ ಯತ್ನಿಸಿದ ಐವರ ಬಂಧನ

ಮೈಸೂರು: ಚಿರತೆ ಅಂಗಾಂಗ ಮಾರಾಟಕ್ಕೆ ಯತ್ನಿಸಿದ ಐವರ ಬಂಧನ

0

ಮೈಸೂರು(Mysuru) : ಚಿರತೆ ಸಾಯಿಸಿ ಅದರ ಅಂಗಾಂಗ ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಬಂಧಿಸಿ ಚಿರತೆ ಚರ್ಮ ಹಾಗೂ ಅಂಗಾಂಗವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹನಗೋಡಿನ‌ ಸಮೀಪದ ಅಬ್ಬೂರಿನ‌ ಓರ್ವ, ವಿವಿಧ ಹಾಡಿಗಳ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನು ಕೆಲವರು ನಾಪತ್ತೆಯಾಗಿದ್ದಾರೆ. ಬಂಧಿತರಿಂದ ಚಿರತೆ ಚರ್ಮ, ನಾಲ್ಕು ಕಾಲಿನ ಭಾಗಗಳು, ಕೃತ್ಯಕ್ಕೆ ಬಳಸಿದ್ದ ಒಂದು ಒಂಟಿ ನಳಿಕೆ‌ ಬಂದೂಕು, ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದಲ್ಲಿ ಚಿರತೆ ಹತ್ಯೆ ಮಾಡಿ ಚರ್ಮ, ನಾಲ್ಕು ಕಾಲಿನ‌ ಭಾಗವನ್ನು ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಹನಗೋಡು ಪಂಚವಳ್ಳಿ ಮುಖ್ಯರಸ್ತೆಯ ಕಡೇಮನುಗನಹಳ್ಳಿ ಕ್ರಾಸ್ ಬಳಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.