ದೆಹಲಿ: ಈ ವರ್ಷ ಸರ್ಕಾರವು ಗುಜರಿ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ಇತರ ಪ್ರಮುಖ ಆದಾಯಗಳೆಂದರೆ ರಕ್ಷಣಾ ಸಚಿವಾಲಯ 168 ಕೋಟಿ ರೂ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 56 ಕೋಟಿ ರೂ. ಮತ್ತು ಕಲ್ಲಿದ್ದಲು ಸಚಿವಾಲಯ 34 ಕೋಟಿ ರೂ ಗಳಿಸಲಾಗಿದೆ.
ಚಂದ್ರನತ್ತ ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್ ಗೆ ಖರ್ಚಾದ ಹಣ ಸುಮಾರು 600 ಕೋಟಿ ರೂ. ಆದರೆ ನರೇಂದ್ರ ಮೋದಿ ಸರ್ಕಾರವು ಹಳೇ ಕಡತ, ಕಚೇರಿಯಲ್ಲಿನ ತುಂಡಾದ ಉಪಕರಣಗಳು ಮತ್ತು ಬಳಕೆಯಲ್ಲಿಲ್ಲದ ವಾಹನ ಸೇರಿದಂತೆ ಗುಜರಿ ವಸ್ತುಗಳನ್ನು ಮಾರಾಟ ಮಾಡಿ ಚಂದ್ರಯಾನಕ್ಕೆ ಖರ್ಚಾದ ಹಣದ ಎರಡು ಪಟ್ಟು ಹಣವನ್ನು ಗಳಿಸಿದೆ. ಸರ್ಕಾರದ ವರದಿ ಪ್ರಕಾರ, ಅಕ್ಟೋಬರ್ 2021 ರಿಂದ ಸುಮಾರು 1,163 ಕೋಟಿ ರೂಪಾಯಿಗಳನ್ನು ಗುಜರಿ ವಸ್ತು ಮಾರಾಟದಿಂದ ಗಳಿಸಿದೆ ಎಂದು ಹೇಳುತ್ತದೆ.
ಈ ವರ್ಷದ ಅಕ್ಟೋಬರ್ನಲ್ಲಿ ಒಂದು ತಿಂಗಳ ಅವಧಿಯ ಪ್ರಚಾರದ ಸಮಯದಲ್ಲಿ ಗಳಿಸಿದ 557 ಕೋಟಿ ರೂ. ಅಕ್ಟೋಬರ್ 2021 ರಿಂದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ 96 ಲಕ್ಷ ಕಡತಗಳನ್ನು ತೆರವು ಮಾಡಲಾಗಿಗದ್ದು, ಸರ್ಕಾರಿ ಕಚೇರಿಗಳಲ್ಲಿ ಸುಮಾರು 355 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ ಎಂದು ವರದಿ ಹೇಳುತ್ತದೆ. ಇದು ಕಚೇರಿಗಳಲ್ಲಿನ ಕಾರಿಡಾರ್ಗಳನ್ನು ಸ್ವಚ್ಛಗೊಳಿಸಲು, ಮುಕ್ತ ಸ್ಥಳವನ್ನು ಮನರಂಜನಾ ಕೇಂದ್ರಗಳಾಗಿ ಮತ್ತು ಇತರ ಉಪಯುಕ್ತ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಕಾರಣವಾಗಿದೆ.
ಗುಜರಿ ಮಾರಾಟದಿಂದ 1,163 ಕೋಟಿ ರೂಪಾಯಿ ಆದಾಯದ ಅಂಕಿ ಅಂಶವು ಪಿ.ಎಂ ನರೇಂದ್ರ ಮೋದಿಯವರ ಸರ್ಕಾರದ ಸ್ವಚ್ಛತೆಯ ಕಾರ್ಯಕ್ರಮವು ಎಷ್ಟು ದೊಡ್ಡ ಮತ್ತು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.
ಈ ವರ್ಷ ಸರ್ಕಾರವು ಗುಜರಿ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ಇತರ ಪ್ರಮುಖ ಆದಾಯಗಳೆಂದರೆ ರಕ್ಷಣಾ ಸಚಿವಾಲಯ 168 ಕೋಟಿ ರೂ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 56 ಕೋಟಿ ರೂ. ಮತ್ತು ಕಲ್ಲಿದ್ದಲು ಸಚಿವಾಲಯ 34 ಕೋಟಿ ರೂ. ಈ ವರ್ಷ ಮುಕ್ತಗೊಳಿಸಲಾದ ಒಟ್ಟು 164 ಲಕ್ಷ ಚದರ ಅಡಿ ಜಾಗದಲ್ಲಿ ಗರಿಷ್ಠ ಜಾಗವನ್ನು ಕಲ್ಲಿದ್ದಲು ಸಚಿವಾಲಯದಲ್ಲಿ 66 ಲಕ್ಷ ಚದರ ಅಡಿ ಮತ್ತು ಭಾರೀ ಕೈಗಾರಿಕೆ ಸಚಿವಾಲಯ 21 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಲಾಗಿದೆ. ರಕ್ಷಣಾ ಸಚಿವಾಲಯ 19 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಿದೆ ಎಂದು ವರದಿ ತೋರಿಸುತ್ತದೆ.
ಈ ವರ್ಷ, ಸುಮಾರು 24 ಲಕ್ಷ ಕಡತಗಳನ್ನು ನಾಶ ಮಾಡಲಾಗಿದೆ. ಇವುಗಳ ಪೈಕಿ ಗರಿಷ್ಠ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (3.9 ಲಕ್ಷ ಕಡತಗಳು) ನಂತರ ಸೇನಾ ವ್ಯವಹಾರಗಳ ಇಲಾಖೆ (3.15 ಲಕ್ಷ ಕಡತಗಳು) ತೆಗೆಯಲಾಗಿದೆ. ಸ್ವಚ್ಛತಾ ಅಭಿಯಾನದ ಪ್ರಭಾವದಿಂದಾಗಿ ಒಟ್ಟಾರೆ ಇ-ಫೈಲ್ ಅಳವಡಿಕೆಯು ಸರ್ಕಾರದಲ್ಲಿ ಸುಮಾರು ಶೇ 96ಕ್ಕೆ ಏರಿಕೆ ಆಗಿದೆ. ಈ ವರ್ಷ ಸುಮಾರು 2.58 ಲಕ್ಷ ಕಚೇರಿ ಸೈಟ್ಗಳನ್ನು ಅಭಿಯಾನದಲ್ಲಿ ಒಳಪಡಿಸಲಾಗಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.