ಮನೆ ಸುದ್ದಿ ಜಾಲ ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಾಜಿ ಸಚಿವರಾದ ಶ್ರೀ ಬಿ.ಜೆ.ಪುಟ್ಟಸ್ವಾಮಿಯವರು

ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಾಜಿ ಸಚಿವರಾದ ಶ್ರೀ ಬಿ.ಜೆ.ಪುಟ್ಟಸ್ವಾಮಿಯವರು

0

ಬೆಂಗಳೂರು (Bengaluru)-ಸಮುದಾಯದ ಏಳಿಗೆಗೆ ಸರ್ವಸಂಗ ಪರಿತ್ಯಾಗಿಯಾಗಿ  ಆಧ್ಯಾತ್ಮಿಕೆಯನ್ನು ಅಪ್ಪಿದ ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳು (ಶ್ರೀ ಬಿ.ಜೆ ಪುಟ್ಟಸ್ವಾಮಿ, ಮಾಜಿ ಸಚಿವರು).

50 ವರ್ಷಗಳ ರಾಜಕೀಯ ಜೀವನದಿಂದ ನಿವೃತ್ತಿ ಪಡೆದು ಇಂದು ‘ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಜಯೇಂದ್ರ ತೀರ್ಥಪುರಿ ಸ್ವಾಮಿಜಿ ಅವರಿಂದ ದೀಕ್ಷೆ ಸ್ವೀಕರಿಸಿದರು.

ತಮ್ಮ ಮಠದಲ್ಲಿ ಬಡ ಮತ್ತು ಅನಾಥ ಮಕ್ಕಳಿಗೆ ವಿದ್ಯೆ ಮತ್ತು ಅನ್ನ ದಾಸೋಹ ಮಾಡುತ್ತ ಜೀವನ ಕಳೆಯಬೇಕೆಂಬ ತೀರ್ಮಾನದಿಂದ ದೀಕ್ಷೆ ಸ್ವೀಕರಿಸಿದ್ದಾರೆ. ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ  ಪ್ರಥಮ ಪೀಠಧಿಪತಿಗಳಾಗಳಿದ್ದಾರೆ.