ಮನೆ ರಾಜ್ಯ ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಡಿಕ್ಕಿ: ಐವರಿಗೆ ಗಾಯ

ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಡಿಕ್ಕಿ: ಐವರಿಗೆ ಗಾಯ

0

ಹುಬ್ಬಳ್ಳಿ: ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಕಾರು ಡಿಕ್ಕಿಯಾದ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ.

ಅಳಿಯನ ಮೇಲಿನ ಸಿಟ್ಟಿನಿಂದ ರಸ್ತೆ ಪಕ್ಕದಲ್ಲಿ ನಿಂತವರಿಗೆ ಏಟು ಬಿದ್ದಿದ್ದು, ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡವರನ್ನು ಮಂಜುನಾಥ ಪೂಜಾರಿ, ಪ್ರಶಾಂತ ಭೂತೆ, ಗರ್ಭಿಣಿ ಮಹಿಳೆಯಾದ ಅಶ್ವಿನಿ ಯಲಿಗಾರ, ಲಕ್ಷ್ಮೀ ಬೆಳವಡಿ, ಇಸ್ಮಾಯಿಲ್ ಯಾದವಾಡ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ಪ್ರಕರಣದ ವಿವರ

ಕೆಲ ತಿಂಗಳುಗಳ ಹಿಂದೆ ತಮ್ಮದೇ ಅಂಗಡಿಯೊಂದರಲ್ಲಿ ಐಶ್ವರ್ಯ ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆಯ ವಿಚಾರವಾಗಿ ಐಶ್ವರ್ಯ ಪತಿ ವಿನೋದ್ ಬೊಂಗಾಳೆ ಹಾಗೂ ಐಶ್ವರ್ಯ ಸಹೋದರ ರಾಹುಲ್ ರೆಣಕೆ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇದಾದ ಬಳಿಕ ರೊಚ್ಚಿಗೆದ್ದ ಮಾವ ವಿನೋದ್ ಎಂಬುವವರು ರಾಹುಲ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ತಪ್ಪಿಸಿಕೊಂಡರೇ, ಇತ್ತ ಸಾರ್ವಜನಿಕರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.