ಮನೆ ಅಪರಾಧ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ಆ್ಯಸಿಡ್ ದಾಳಿ ಮಾಡಿದ ತಂದೆ

ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ಆ್ಯಸಿಡ್ ದಾಳಿ ಮಾಡಿದ ತಂದೆ

0

ನೆಲಮಂಗಲ: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ತಂದೆ ಕೆಮಿಕಲ್ ಮಿಶ್ರಿತ ಆ್ಯಸಿಡ್ ದಾಳಿ ಮಾಡಿರುವಂತಹ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ನಿವೃತ್ತ ಪಿಎಸ್ಐ ರಾಮಕೃಷ್ಣಯ್ಯರಿಂದ ಕೃತ್ಯವೆಸಗಲಾಗಿದೆ.

ತಂದೆ ಜೊತೆ ಅಣ್ಣ ಉಪೇಂದ್ರ ಕುಮಾರ್, ಅಕ್ಕ ಕಲಾವತಿಯೂ ಸೇರಿರುವ ಆರೋಪ ಮಾಡಲಾಗಿದೆ. 25 ರಂದು ಘಟನೆ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆ್ಯಸಿಡ್ ದಾಳಿಯಿಂದ ಕಿರಣ್ ಅವರ ಒಂದು ಕಣ್ಣಿಗೆ ಮತ್ತು ಮೈಮೇಲಲ್ಲ ಗಾಯಗಳಾಗಿ ರೋಧಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಯತ್ನ ಮಾಡುತ್ತೇವೆ ದೃಷ್ಟಿ ಬರುವುದು ಡೌಟು ಎಂದು ನಾರಾಯಣ ನೇತ್ರಾಲಯದ ವೈದ್ಯರು ಹೇಳಿದ್ದಾರೆ.