ಬೆಂಗಳೂರು: ಅನೈತಿಕ ಸಂಬಂಧವೊಂದು ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೆ.ಪಿ.ನಗರದ ಸಾರಕ್ಕಿ ಪಾರ್ಕ್ನಲ್ಲಿ ಗುರುವಾರ ಸಂಜೆ ನಡೆದಿದೆ.
ಗೊರಗುಂಟೆಪಾಳ್ಯ ನಿವಾಸಿ ಸುರೇಶ್ (45) ಮತ್ತು ಜೆ.ಪಿ.ನಗರದ ಶಾಕಾಂಬರಿ ನಗರ ನಿವಾಸಿ ಅನುಷಾ (24) ಕೊಲೆ ಯಾದವರು.
ಗುರುವಾರ ಸಂಜೆ 4.15ಕ್ಕೆ ಸಾರಕ್ಕಿ ಪಾರ್ಕ್ನಲ್ಲಿ ಸುರೇಶ್, ಅನುಷಾಳಿಗೆ ಚಾಕು ಇರಿದುಕೊಂದರೆ, ಸುರೇಶ್ ನನ್ನು ಅನುಷಾಳ ತಾಯಿ ಗೀತಾ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದಾರೆ.
ಘಟನೆ ಸಂಬಂಧ ಗೀತಾರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಗೊರಗುಂಟೆಪಾಳ್ಯ ನಿವಾಸಿ ಸುರೇಶ್ ಇವೆಂಟ್ ಮ್ಯಾನೆಜ್ ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಸಂಸ್ಥೆಯಲ್ಲಿ ಅನುಷಾ ಕೂಡ ಕೆಲಸ ಮಾಡುತ್ತಿದ್ದರು. ಸುರೇಶ್ ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಈ ನಡುವೆ ಅನುಷಾ ಜತೆ ಸುರೇಶ್ ಗೆ ಪ್ರೇಮಾಂಕುರವಾಗಿದ್ದು, ಇಬ್ಬರು ಕಳೆದ 5 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು.
ಇತ್ತೀಚೆಗೆ ಅನುಷಾ, ತನ್ನಿಂದ ಅಂತರ ಕಾಯ್ದುಕೊಳ್ಳುವಂತೆ ಸುರೇಶ್ ಗೆ ಸೂಚಿಸಿ, ಕೆಲಸ ಕೂಡ ಬಿಟ್ಟಿದ್ದಳು. ಹೀಗಾಗಿ ಜೀವನ ನಿರ್ವಹಣೆಗಾಗಿ ಆಕೆ, ಮಕ್ಕಳ ಕೇರ್ ಟೆಕರ್ ಆಗಿ ಕೆಲಸ ಮಾಡಿಕೊಂಡಿದ್ದಳು. ಆದರೂ, ಸುರೇಶ್ ಆಗಾಗ್ಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಆಗಲೂ ಆಕೆ ಮತ್ತೂಮ್ಮೆ ಸಂಬಂಧ ಮುಂದುವರಿಸುವುದು ಬೇಡ. ಒಂದು ವೇಳೆ ಇದೇ ರೀತಿ ತೊಂದರೆ ಕೊಟ್ಟರೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾಳೆ. ಆಗ ಆರೋಪಿ ಸಂಪರ್ಕ ಕಡಿತಗೊಳಿಸಿಕೊಳ್ಳಬೇಡ ಎಂದು ಮನವಿ ಮಾಡಿದ್ದ ಎಂದು ಪೊಲೀಸರು ಹೇಳಿದರು.
ಪ್ರೇಮಿಯ ಕಿರುಕುಳದಿಂದ ಬೇಸತ್ತಿದ್ದ ಅನುಷಾ ಬುಧವಾರ ಜೆ.ಪಿ.ನಗರ ಠಾಣೆಗೆ ಸುರೇಶ್ ವಿರುದ್ಧ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಠಾಣೆಗೆ ಕರೆಸಿದ್ದ ಪೊಲೀಸರು, ಸುರೇಶ್ ಗೆ ಮತ್ತೂಮ್ಮೆ ಅನುಷಾಗೆ ತೊಂದರೆ ಕೊಡಬೇಡ. ಒಂದು ವೇಳೆ ತೊಂದರೆ ಕೊಟ್ಟರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು.
ಇತ್ತ ಮನೆಗೆ ತೆರಳಿದ್ದ ಅನುಷಾಗೆ ಕೆಲ ಹೊತ್ತಿನ ಬಳಿಕ ಕರೆ ಮಾಡಿದ ಸುರೇಶ್, ಕೊನೆಯದಾಗಿ ಮಾತಾಡಬೇಕು. ಸಾರಕ್ಕಿ ಪಾರ್ಕ್ ಗೆ ಬರುವಂತೆ ಹೇಳಿದ್ದಾನೆ. ಇತ್ತ ಪುತ್ರಿಯ ವರ್ತನೆಯಿಂದ ಅನುಮಾನಗೊಂಡ ತಾಯಿ ಗೀತಾ, ಅನುಷಾ ಹಿಂದೆಯೇ ಬಂದಿದ್ದಾರೆ ಎಂದು ಪೊಲೀಸರು ಹೇಳಿದರು.
ಪಾರ್ಕ್ ಗೆ ಬಂದ ಅನುಷಾ ಜತೆ ಸುರೇಶ್ ಮತ್ತೆ ದೂರವಾಗುತ್ತಿರುವ ವಿಚಾರ ಪ್ರಸ್ತಾಪಿಸಿ ಗಲಾಟೆ ಆರಂಭಿಸಿದ್ದಾನೆ. ಅದೇ ವೇಳೆ ಪಾರ್ಕ್ ಗೆ ಬಂದ ಗೀತಾ, ಪುತ್ರಿಯ ಜತೆ ವಾಗ್ವಾದ ಮಾಡುತ್ತಿದ್ದ ಸುರೇಶ್ ನನ್ನು ಪ್ರಶ್ನಿಸಿದ್ದಾರೆ. ಗಲಾಟೆ ವಿಕೋಪಕ್ಕೆ ಹೋದಾಗ, ಆರೋಪಿ ಕೃತ್ಯ ಎಸಗಲೆಂದ ತಂದಿದ್ದ ಚಾಕುವಿನಿಂದ ಅನುಷಾಗೆ ಐದಾರು ಬಾರಿ ಇರಿದು ಕೊಲೆಗೈದಿದ್ದಾನೆ. ಇತ್ತ ಪುತ್ರಿ ರಕ್ಷಣೆಗೆ ಧಾವಿಸಿದ ಗೀತಾಗೂ ಆರೋಪಿ ಇರಿಯಲು ಯತ್ನಿಸಿದ್ದಾನೆ. ಆದರೆ, ಆಕೆ ತಪ್ಪಿಸಿಕೊಂಡು, ಕಲ್ಲಿನಿಂದ ಸುರೇಶ್ ತಲೆಗೆ ಹೊಡೆದಿದ್ದಾರೆ. ಕೆಳಗೆ ಬಿದ್ದ ಸುರೇಶ್ ಮೇಲೆ ಕೋಪಗೊಂಡು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಹೆಚ್ಚು ವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಸರ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.