ಮನೆ ಅಪರಾಧ ಮೈಸೂರಿನಲ್ಲಿ ಮತ್ತೆ ಸರಗಳ್ಳತನ: ಮಹಿಳೆಯ ಚಿನ್ನದ  ಸರ ಕದ್ದ ಖದೀಮರು

ಮೈಸೂರಿನಲ್ಲಿ ಮತ್ತೆ ಸರಗಳ್ಳತನ: ಮಹಿಳೆಯ ಚಿನ್ನದ  ಸರ ಕದ್ದ ಖದೀಮರು

0

ಮೈಸೂರು(Mysuru): ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಖದೀಮರು ಆಕೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಸಿದ್ಧಾರ್ಥನಗರದಲ್ಲಿ ನಡೆದಿದೆ.

ಸಿದ್ಧಾರ್ಥನಗರದ ನಿವಾಸಿ ಲಕ್ಷ್ಮೀ ಅರಸ್‌ ಎಂಬಾಕೆಯೇ ಸರ ಕಳೆದುಕೊಂಡವರು. 

ಮೇ 12 ರಂದು ಸಂಜೆ ಮಹಿಳೆ ಜ್ಞಾನಮಾರ್ಗದಲ್ಲಿ ನಡೆದು ಹೋಗುತ್ತಿದ್ದ ವೇಳೆ  ಬೈಕ್‌ ಮೂಲಕ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಆಕೆಯ ಕುತ್ತಿಗೆಯಲ್ಲಿದ್ದ ಸರ ಕಸಿದು ಪರಾರಿಯಾಗಿದ್ದಾರೆ.

ಈ ಸಂಬಂಧ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.