ಮನೆ ಸುದ್ದಿ ಜಾಲ ಕರಾಮುವಿ ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮುಂದುವರಿಕೆ

ಕರಾಮುವಿ ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮುಂದುವರಿಕೆ

0

ಬೆಂಗಳೂರು(Bengaluru): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಡಾ. ವಿದ್ಯಾಶಂಕರ್ ಮತ್ತೆ ಒಂದು ವರ್ಷಗಳ ಕಾಲ ಮುಂದುವರೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶಿಸಿದ್ದಾರೆ.

ಕೆಎಸ್ ಒಯು ಕುಲಪತಿಯಾಗಿ ಡಾ. ವಿದ್ಯಾಶಂಕರ್ ಅವರ ಅವಧಿ 29-5-2022ಕ್ಕೆ ಮುಕ್ತಾಯವಾಗುತ್ತಿತ್ತು. ಇದೀಗ ಮತ್ತೆ ಒಂದು ವರ್ಷಗಳ ಕಾಲ ಕುಲಪತಿಯಾಗಿ ಡಾ ವಿದ್ಯಾಶಂಕರ್ ಅವರನ್ನ ಮುಂದುವರೆಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

30-5-2022 ರಿಂದ ಒಂದು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ  ಡಾ.ವಿದ್ಯಾಶಂಕರ್ ಕೆ.ಎಸ್ ಒಯು ಕುಲಪತಿಯಾಗಿ ಮುಂದುವರೆಯಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.